ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ಮೌಲ್ಯಯುತ ಚಟುವಟಿಕೆಯ ಮೂಲಕ ಸಂಚಲನ ಮೂಡಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ,(ರಿ.) ಕಾಸರಗೋಡು ಇದರ ನೇತೃತ್ವದ ಯಕ್ಷಾನುಗ್ರಹ ವಾಟ್ಸಾಪ್ ಬಳಗ ಕಳೆದ ಮೇ ತಿಂಗಳಿಂದ, ಲಾಕ್ ಡೌನ್ ಸಮಯದಲ್ಲಿ ವಾಟ್ಸಾಪ್ ಮಾದ್ಯಮದ ಸದ್ಬಳಕೆ ಎಂದು ಆರಂಭಿಸಿದ ಮರೆಯಲಾಗದ ಮಹಾನುಭಾವರು, ಕೀರ್ತಿಶೇಷ ಯಕ್ಷಗಾನ ಕಲಾವಿದರ ಸಂಸ್ಮರಣೆಯ ಲೇಖನಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸುವ ಉದ್ದೇಶದ ಸಮಾಲೋಚನಾ ಸಭೆಯು ಶ್ರೀ ಮಾಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆಲಂಗಾರು, ಮೂಡುಬಿದರೆಯಲ್ಲಿ ನಡೆಯಿತು.
ಗೌರವ ಸದಸ್ಯರಾದ ಶ್ರೀ ಶ್ರೀಧರ ಡಿ ಯಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್ ಅವರು ಉಪಸ್ಥಿತರಿದ್ದರು. ಪುಸ್ತಕ ಪ್ರಕಟಣೆಯ ಬಗ್ಗೆ ಹಲವು ಮಹತ್ವದ ತೀರ್ಮಾನ ಮಾಡಲಾಯಿತು. ಮುಂದಿನ ಪೀಳಿಗೆಗೆ ಧಾಖಲೆ ಯಾಗಿರುವ ಮಹತ್ ಗ್ರಂಥದಲ್ಲಿ 150 ಕ್ಕೂ ಹೆಚ್ಚು ಕೀರ್ತಿಶೇಷ ಕಲಾವಿದರ ಸಂಪೂರ್ಣ ವಿವರ ಲಭ್ಯವಿರುತ್ತದೆ.


ಯಕ್ಷಾನುಗ್ರಹ ವಾಟ್ಸಾಪ್ ಬಳಗ ಸದಸ್ಯರಾದ ಶ್ರೀ ವಿ. ರಾಘವೇಂದ್ರ ಉಡುಪ ನೇರಳೆಕಟ್ಟೆ ,ಕುಂದಾಪುರ ಇವರು ಸಂಪೂರ್ಣ ಲೇಖನಗಳನ್ನು ಸಂಗ್ರಹಿಸಿಟ್ಟಿರುತ್ತಾರೆ. ಸಮಾಲೋಚನಾ ಸಭೆಯಲ್ಲಿ ಬಳಗದ ಸದಸ್ಯರುಗಳಾದ ವಿಠಲ ಕಾಮತ್ ಉಪ್ಪಿನಕುದ್ರು, ಮುರಳಿ ಸಾಲಿಗ್ರಾಮ, ಯಸ್. ಯನ್.ಭಟ್ ಬಾಯಾರು, ಪ್ರಶಾಂತ್ ಹೊಳ್ಳ, ನಿಟ್ಟೆ, ಪ್ರೋ. ಸದಾಶಿವ ಶೆಟ್ಟಿಗಾರ್ ಕಿನ್ನಿಗೊಳಿ, ಸದಾಶಿವ ರಾವ್ ನೆಲ್ಲಿಮಾರ್, ಪತ್ರಕರ್ತ ಅವಿನಾಶ್ ಬೈಪಡಿತ್ತಾಯ, ಡಾ.ಶ್ರುತಕೀರ್ತಿರಾಜ್ ಉಜಿರೆ, ಚಂದ್ರಶೇಖರ ಭಟ್ ಕೊಂಕಣಾಜೆ, ಗಣರಾಜ ಭಟ್, ಪ್ರತಿಷ್ಠಾನದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಉಪಸ್ಥಿತರಿದ್ದರು.
ಮುಂದಿನ ಮೇ ತಿಂಗಳಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಲೊಕಾರ್ಪಣೆಯ ಸಂಧರ್ಭದಲ್ಲಿ ಗ್ರಂಥ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು.
- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
