ಯಕ್ಷಗಾನ ಶಿಕ್ಷಕರಿಗೆ ಶಿಕ್ಷಣ
ಸಿರಿಬಾಗಿಲು ಪ್ರತಿಷ್ಠಾನದಲ್ಲಿ ತೆಂಕುತಿಟ್ಟು ಯಕ್ಷಗಾನ ಶಾಸ್ತ್ರೀಯ ನಾಟ್ಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ತೆಂಕುತಿಟ್ಟು ಯಕ್ಷಗಾನದ ನಾಟ್ಯ ಗುರುಗಳಿಗೆ ವಿಶೇಷವಾದ ಎರಡನೆಯ ತರಗತಿ ಪ್ರತಿಷ್ಠಾನದಲ್ಲಿ ನಡೆಸಲಾಯಿತು.
ಅಂದಾಜು 20 ರ ವರೆಗಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯಕ್ಷಗಾನದ ಚೌಕಿ ಪೂಜೆಯ ನಂತರ ಹಿಮ್ಮೇಳದವರು ಹಾಗೂ ಕೋಡಂಗಿವೇಷದವರು ಹಿಂದಿನ ಕಾಲದಲ್ಲಿ ದೀಪದೊಂದಿಗೆ ರಂಗ ಪ್ರವೇಶಿಸುವ ವಿಧಾನ, ಅದರ ವಿಶೇಷತೆ, ಪೂರ್ವ ರಂಗದ ಕೆಲವು ಭಾಗಗಳು,
ಪೂರ್ವ ರಂಗದಿಂದ ಇಂದು ವಿರಳವಾದ ಗಣಪತಿ ಕೌತುಕ ನಾಟ್ಯ ಕುಣಿತ ,ಇದರ ಕುರಿತು ಅಭ್ಯಾಸ ಹಾಗೂ ಪ್ರಾತ್ಯಕ್ಷಿಕೆ ಶ್ರೀ ಕರ್ಗಲ್ಲು ಗುರುಗಳು ನಡೆಸಿಕೊಟ್ಟರು.