Friday, September 20, 2024
Homeಸುದ್ದಿಕುರಿಯ ಗೋಪಾಲಕೃಷ್ಣ ಭಟ್ ನಿಧನ

ಕುರಿಯ ಗೋಪಾಲಕೃಷ್ಣ ಭಟ್ ನಿಧನ


ಕುರಿಯ ವಿಠಲ ಶಾಸ್ತ್ರಿಗಳ ಸಹೋದರನ ಮಗ, ಭಾಗವತ ಕುರಿಯ ಗಣಪತಿ ಶಾಸ್ತಿçಗಳ ಕಿರಿಯ ಸಹೋದರ ಕುರಿಯ ಗೋಪಾಲಕೃಷ್ಣ ಭಟ್ ನಿನ್ನೆ (21.08.24) ನಿಧನ ಹೊಂದಿದರು.

ಕುರಿಯ ಮೂಲ ಮನೆಯ ಸಮೀಪಲ್ಲಿದ್ದು ಮನೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಇವರು ಅಣ್ಣ ಗಣಪತಿ ಶಾಸ್ತ್ರಿಗಳ ಕಲಾಬದುಕಿಗೆ ಯಾವುದೇ ತೊಡಕಾಗದಂತೆ ಅವರನ್ನು ಚೆನ್ನಾಗಿ ನೋಡಿಕೊಂಡು ಬಂದಿದ್ದರು.

ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯಲ್ಲಿ ಕಛೇರಿ ಅಧೀಕ್ಷಕರಾಗಿದ್ದ ಇವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ದೊಡ್ಡ ಕಲಾಮನೆತನದಲ್ಲಿ ಜನಿಸಿದ, ಸಹೃದಯಿ ಕಲಾಪೋಷಕರಾಗಿದ್ದ ಇವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments