ಯಕ್ಷಗಾನ ಕಲಾವಿದ ಗುರುಪ್ರಸಾದ್ ನೀರ್ಜೆಡ್ಡು ನಿಧನ.
ಉಡುಪಿ : ಮಂದಾರ್ತಿ, ಮಡಾಮಕ್ಕಿ, ಸಾಲಿಗ್ರಾಮ, ಅಮೃತೇಶ್ವರೀ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ಸುಮಾರು 12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈಯುತ್ತಿದ್ದ ಗುರುಪ್ರಸಾದ್ ನೀರ್ಜೆಡ್ಡು (26 ವರ್ಷ) ನಿನ್ನೆ (30.07.2024) ನಿಧನ ಹೊಂದಿದರು.
ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಬಲ್ಲ ಮೂಲ ತಿಳಿದುಬಂದಿದೆ.
ಮಂದಾರ್ತಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾರಾಡಿ ರಮೇಶ ಗಾಣಿಗರಿಂದ ಯಕ್ಷಗಾನ ನೃತ್ಯಭ್ಯಾಸ ಮಾಡಿದ ಭರವಸೆಯ ಕಲಾವಿದರಾಗಿದ್ದ ಇವರು ಮುಂದಿನ ತಿರುಗಾಟಕ್ಕೆ ಹಾಲಾಡಿ ಮೇಳಕ್ಕೆ ನೇಮಕಗೊಂಡಿದ್ದರು.
ಮೃತರು ತಾಯಿ, ತಮ್ಮ ಹಾಗೂ ಅಭಿಮಾನಿ ಬಳಗವನ್ನ ಅಗಲಿದ್ದಾರೆ.