Sunday, September 29, 2024
Homeಸುದ್ದಿಪುತ್ತೂರಿನಲ್ಲಿ ಪದ್ಯಾಣ ಸಂಸ್ಮರಣೆ - ಕುರಿಯ, ಪದ್ಯಾಣ ಪ್ರಶಸ್ತಿ ಪ್ರದಾನ, ತಾಳಮದ್ದಳೆ ಸಪ್ತಾಹ

ಪುತ್ತೂರಿನಲ್ಲಿ ಪದ್ಯಾಣ ಸಂಸ್ಮರಣೆ – ಕುರಿಯ, ಪದ್ಯಾಣ ಪ್ರಶಸ್ತಿ ಪ್ರದಾನ, ತಾಳಮದ್ದಳೆ ಸಪ್ತಾಹ

ಜುಲೈ 1ರಿಂದ ಜುಲೈ 7ರ ವರೆಗೆ ಪುತ್ತೂರಿನಲ್ಲಿ ಅಮೋಘ ತಾಳಮದ್ದಳೆ ಸಪ್ತಾಹ ಜರಗಲಿದೆ.

ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ದಿನಾಂಕ 01.07.2024ರಿಂದ 07.07.2024ರ ವರೆಗೆ ಯಕ್ಷಗಾನ ಕಲಾರಸಿಕರಿಗೆ ಅಮೋಘ ತಾಳಮದ್ದಳೆಗಳ ರಸದೌತಣ ಸಿಗಲಿದೆ.

ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಶ್ರಯದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು ಪ್ರಸ್ತುತಪಡಿಸುವ, ಭಾಗವತ ಪದ್ಯಾಣ ಗಣಪತಿ ಭಟ್ ಸಂಸ್ಮರಣೆ, ಕುರಿಯ ಮತ್ತು ಪದ್ಯಾಣ ಪ್ರಶಸ್ತಿ ಪ್ರದಾನ ಮತ್ತು ಏಳು ದಿನಗಳಲ್ಲಿ ತಾಳಮದ್ದಳೆ ಕೂಟ ನಡೆಯಲಿದೆ.

ಈ ಬಾರಿಯ ಪದ್ಯಾಣ ಪ್ರಶಸ್ತಿಯನ್ನು ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಮತ್ತು ಕುರಿಯ ಪ್ರಶಸ್ತಿಯನ್ನು ಹಿಮ್ಮೇಳ ಕಲಾವಿದರಾದ ಶ್ರೀ ಸೀತಾರಾಮ ತೋಳ್ಪಾಡಿತ್ತಾಯರಿಗೆ ನೀಡಲಾಗುತ್ತದೆ.

ವಿವರಗಳಿಗೆ ಚಿತ್ರಗಳನ್ನು ನೋಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments