ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಇವರು ಶ್ರೀ ಸತ್ಯಸಾಯಿ ಸೇವಾ ಸಮಿತಿ, ಪೆರ್ಲ ಇವರ ಸಹಭಾಗಿತ್ವದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದಾರೆ.
ದಿನಾಂಕ 07.07.2024ನೇ ಆದಿತ್ಯವಾರದಂದು ಮಧ್ಯಾಹ್ನ ಘಂಟೆ 2.30 ರಿಂದ ಸಂಜೆ ಘಂಟೆ 5.30ರ ವರೆಗೆ ಈ ಶಿಬಿರ ಸಿರಿಬಾಗಿಲಿನಲ್ಲಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ಆಸಕ್ತರು ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ವಿವರಗಳಿಗೆ ಕೆಳಗಿನ ಕರಪತ್ರದ ಚಿತ್ರವನ್ನು ನೋಡಿ.
