Saturday, September 21, 2024
Homeಸುದ್ದಿ'ನಿರಂತರ' ಖ್ಯಾತಿಯ ಖ್ಯಾತ ಕಾದಂಬರಿಕಾರ, ನಾಟಕಕಾರ ಮತ್ತು ಕವಿ, ತುಳು-ಕನ್ನಡ-ಇಂಗ್ಲೀಷ್ ಭಾಷಾ ಸಾಹಿತಿ ಕೆ.ಟಿ.ಗಟ್ಟಿ...

‘ನಿರಂತರ’ ಖ್ಯಾತಿಯ ಖ್ಯಾತ ಕಾದಂಬರಿಕಾರ, ನಾಟಕಕಾರ ಮತ್ತು ಕವಿ, ತುಳು-ಕನ್ನಡ-ಇಂಗ್ಲೀಷ್ ಭಾಷಾ ಸಾಹಿತಿ ಕೆ.ಟಿ.ಗಟ್ಟಿ ನಿಧನ

ಖ್ಯಾತ ಕಾದಂಬರಿಕಾರ, ನಾಟಕಕಾರ ಮತ್ತು ಕವಿ ಕೆ. ತಿಮ್ಮಪ್ಪ ಗಟ್ಟಿ (ಕೆ.ಟಿ. ಗಟ್ಟಿ) ಮಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ, ಭಾಷಾತಜ್ಞ , ಅಧ್ಯಾಪಕರಾಗಿ ಅಪಾರ ಜನಮೆಚ್ಚುಗೆಗೆ ಪಾತ್ರರಾಗಿದ್ದ ಕೆ.ಟಿ.ಗಟ್ಟಿಯವರು ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಸೇವೆ ಸಲ್ಲಿಸಿದವರು.

ಖ್ಯಾತ ಕಾದಂಬರಿಕಾರ, ನಾಟಕಕಾರ ಮತ್ತು ಕವಿ ಕೆ.ಟಿ. ಗಟ್ಟಿ ಅವರು ಫೆಬ್ರವರಿ 19 ರಂದು ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಇವರ ತಂದೆ ಯಕ್ಷಗಾನ ಕಲಾವಿದರೂ ಆಗಿದ್ದರು. ಖ್ಯಾತ ಯಕ್ಷಗಾನ ಕಲಾವಿದ ಕೂಡ್ಲು ಧೂಮಪ್ಪ ಗಟ್ಟಿಯವರ ಸುಪುತ್ರ ಕೂಡ್ಲು ತಿಮ್ಮಪ್ಪ ಗಟ್ಟಿ (ಕೆ.ಟಿ.‌ಗಟ್ಟಿ)

ಕೆ.ಟಿ ಗಟ್ಟಿಯವರು 80 ಕ್ಕೂ ಹೆಚ್ಚು ಕಾದಂಬರಿಗಳು, ಪ್ರಬಂಧಗಳು, ಕವನಗಳು ಮತ್ತು 50 ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಹಾಗೂ ಇತರ ಕೃತಿಗಳನ್ನು ರಚಿಸಿದ್ದಾರೆ. ಇವರ ನಿರಂತರ ಎಂಬ ಕಾದಂಬರಿಯ ಆ ಕಾಲದಲ್ಲಿ ಬಹಳ ಜನಮೆಚ್ಚುಗೆ ಪಡೆಯಿತು.

ಸೌಮ್ಯ, ಮನೆ, ರಾಜಯಜ್ಞ, ನಿರಂತರ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ಥೆ, ಕೂಪ, ಬಿಸಿಲುಗುದುರೆ, ಮೃತ್ಯೋಮ ಅಮೃತಂಗಮಯ, ಯುಗಾಂತರ, ಶಿಲಾ ತಪಸ್ವಿ, ಸ್ವರ್ಣ ಮೃತ್ಯು, ಮತ್ತು ಅರಾಘ್ನಮೃತ ಅವರು ರಚಿಸಿದ ಕೆಲವು ಪ್ರಮುಖ ಕಾದಂಬರಿಗಳು.

ಜುಲೈ 22, 1938 ರಂದು ಕೇರಳದ ಕಾಸರಗೋಡು ಜಿಲ್ಲೆಯ ಕೂಡ್ಲುವಿನಲ್ಲಿ ಜನಿಸಿದ ಶ್ರೀ ಕೆ.ಟಿ. ಗಟ್ಟಿಯವರ ಸಾಹಿತ್ಯ ಕೃಷಿ ಎಳವೆಯಿಂದಲೇ ಆರಂಭವಾಗಿತ್ತು.

ಅವರು 80 ಕ್ಕೂ ಹೆಚ್ಚು ಕಾದಂಬರಿಗಳು, ಪ್ರಬಂಧಗಳು, ಕವನಗಳು ಮತ್ತು 50 ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಶ್ರೀ ಗಟ್ಟಿಯವರು 10ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, ಮತ್ತು ಎರಡನೇ ಕಾಸರಗೋಡು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments