ಸಂಸ್ಕ್ರತ ಶಿಕ್ಷಕ ಶ್ರೀ ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ಅವರು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಜನವರಿ 13 ಮತ್ತು 14ರಂದು ನಡೆದ 42ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ, ಹೈಜಂಪ್ ನಲ್ಲಿ ಪ್ರಥಮ, 110 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ ಮತ್ತು ಹ್ಯಾಮರ್ ತ್ರೋದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಅವರು ಫೆಬ್ರವರಿ 2ರಿಂದ 4ರವರೆಗೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆಯಲಿರುವ 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ. ಶ್ರೀ ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ಸಂಸ್ಕ್ರತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
![](https://yakshadeepa.com/wp-content/uploads/2024/01/IMG-20240120-WA0001-816x1024.jpg)
- 10 ತಿಂಗಳ ನಂತರ ಫರಿದಾಬಾದ್ನಲ್ಲಿ ಕೊಳೆತ ಸ್ಥಿತಿಯಲ್ಲಿ 17 ವರ್ಷದ ಯುವತಿಯ ಶವ ಪತ್ತೆ – ಯುವತಿಯ ತಂದೆ ಪೊಲೀಸರಿಗೆ ಇಮೇಲ್ ನಲ್ಲಿ ದೂರು ಕಳುಹಿಸಿದ ನಂತರ ಮನೆಯೊಳಗೆ ಹೂಳಲಾಗಿದ್ದ ಶವ ಪತ್ತೆ – ತಾಯಿಯ ಬಂಧನ
- ಹಿಂದಿನಿಂದ ಬೈಕ್ ಗುದ್ದಿ ವಿದ್ಯಾರ್ಥಿನಿಯ ದುರಂತ ಅಂತ್ಯ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ನಾಯಕರ ಆಯ್ಕೆ
- ಜಬ್ಬಾರ್ ಸಮೊ ಅವರಿಗೆ ಮಟ್ಟಿ ಮುರಲೀಧರ ರಾವ್ ಸ್ಮರಣಾರ್ಥ ಪ್ರಶಸ್ತಿ, ಸೇರಾಜೆ ಸೀತಾರಾಮ ಭಟ್ ಅವರಿಗೆ ಪೆರ್ಲ ಕೃಷ್ಣ ಭಟ್ ಸ್ಮರಣಾರ್ಥ ಪ್ರಶಸ್ತಿ
- ಪುತ್ತೂರಿನಲ್ಲಿ ಪದ್ಯಾಣ ಸಂಸ್ಮರಣೆ – ಕುರಿಯ, ಪದ್ಯಾಣ ಪ್ರಶಸ್ತಿ ಪ್ರದಾನ, ತಾಳಮದ್ದಳೆ ಸಪ್ತಾಹ