ಯಕ್ಷಗಾನ ಕಲಾವಿದನ ಕುಟುಂಬಕ್ಕೆ ನೆರವು.
ಮೂರು ದಶಕಗಳ ಕಾಲ ಬಡಗುತಿಟ್ಟು ಯಕ್ಷಗಾನದಲ್ಲಿ ವೇಷಧಾರಿಯಾಗಿ ಸೇವೆಸಲ್ಲಿಸಿ, ಇತ್ತೀಚೆಗೆ ನಿಧನರಾದ ಬಾಲಕೃಷ್ಣ ನಾಯಕ್ ಇವರ ಪತ್ನಿಗೆ ಸಾಂತ್ವನ ನಿಧಿಯಾಗಿ ಯಕ್ಷಗಾನ ಕಲಾರಂಗದ ವತಿಯಿಂದ 30,000/- ರೂಪಾಯಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ
ಹಾಗೂ ಬಾಲಕೃಷ್ಣ ನಾಯಕ್ ರ ಪುತ್ರಿ, ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ಶುಭ ನಾಯಕ್ ಉಪಸ್ಥಿತರಿದ್ದರು.
