Saturday, July 6, 2024
Homeಸುದ್ದಿಸಿರಿಬಾಗಿಲು ಸಾಂಸ್ಕೃತಿಕ ಭವನ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ- ಪೂಜ್ಯ ಎಡನೀರು ಶ್ರೀಗಳಿಂದ

ಸಿರಿಬಾಗಿಲು ಸಾಂಸ್ಕೃತಿಕ ಭವನ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ- ಪೂಜ್ಯ ಎಡನೀರು ಶ್ರೀಗಳಿಂದ


ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ದ ಬೃಹತ್ ಯೋಜನೆಯಾದ ಸಾಂಸ್ಕೃತಿಕ ಭವನವನ್ನು ಡಿಸೆಂಬರ್ 26 ರಂದು ಮಂಗಳವಾರ ರಾಜರ್ಷಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಯ ಗೊಳಿಸಲಿದ್ದಾರೆ.

ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಯನ್ನು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀಮದ್ ಎಡನೀರು ಮಠದಲ್ಲಿ ಬಿಡುಗಡೆ ಗೊಳಿಸಿದರು.ಗಡಿನಾಡು ಕಾಸರಗೋಡಿಗೆ ಸಾಂಸ್ಕೃತಿಕ ಭವನವು ಮುಂದಿನ ದಿನಗಳಲ್ಲಿ ದೊಡ್ಡ ಕೊಡುಗೆಯಾಗಲಿದೆ.

ಸಂಪೂರ್ಣ ಯಶಸ್ವಿ ಯಾಗಿ ನಡೆಯಲಿ ಎಂದು ಹಾರೈಸಿ ದರು. ಲೋಕಾರ್ಪಣಾ ಕಾರ್ಯಕ್ರಮ ದ ಸ್ವಾಗತ ಸಮಿತಿಯ ಸಂಚಾಲಕರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ. ರಂಗ ನಿರ್ದೇಶಕ ಮೂರ್ತಿ ದೇರಾಜೆ, ಕನ್ನಡ ಗ್ರಾಮದ ಶಿವರಾಮ ಕಾಸರಗೋಡು, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ಶ್ಯಾಮ್ ಕುಂಚಿನಡ್ಕ, ರಾಜಾರಾಮ ರಾವ್ ಮಿಯಪದವು, ಶ್ರೀಮುಖ ಯಸ್. ಅರ್ ಮಯ್ಯ, ಶ್ರೀರಾಜ ಮಯ್ಯ ಉಪಸ್ಥಿತರಿದ್ದು. ಲೋಕಾರ್ಪಣೆಯ ಕಾರ್ಯಕ್ರಮ ಕ್ಕೆ ಗಣ್ಯಾತಿಗಣ್ಯರ ಗಡಣವೇ ಸಿರಿಬಾಗಿಲಿಗೆ ಆಗಮಿಸಲಿದ್ದಾರೆ.

26 ರಂದು ಸಂಜೆ 7 ರಿಂದ ಶ್ರೀ ಧರ್ಮಸ್ಥಳ ಮೇಳದವರ ನಂದಿ ನಂದಿನಿ ಯಕ್ಷಗಾನ ಬಯಲಾಟ ಪಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments