Saturday, September 21, 2024
Homeಸುದ್ದಿಯಕ್ಷಗಾನ ಕಲಾರಂಗ ಪ್ರಶಸ್ತಿ-2023’ ಪ್ರಕಟ - ಗುಂಡಿಮಜಲು, ರಾಧಾಕೃಷ್ಣ ನಾವಡ, ಸಿದ್ಧಕಟ್ಟೆ, ಚಿದಂಬರ ಬಾಬು ಸೇರಿದಂತೆ...

ಯಕ್ಷಗಾನ ಕಲಾರಂಗ ಪ್ರಶಸ್ತಿ-2023’ ಪ್ರಕಟ – ಗುಂಡಿಮಜಲು, ರಾಧಾಕೃಷ್ಣ ನಾವಡ, ಸಿದ್ಧಕಟ್ಟೆ, ಚಿದಂಬರ ಬಾಬು ಸೇರಿದಂತೆ 22 ಜನರಿಗೆ ಪ್ರಶಸ್ತಿ


ಪ್ರತಿವರ್ಷ ಯಕ್ಷಗಾನ ಕಲಾರಂಗವು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ಸಾಧಕ ಕಲಾವಿದರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡುತ್ತಿದ್ದು, ಈ ಬಾರಿ ತೆಂಕು ಹಾಗೂ ಬಡಗುತಿಟ್ಟಿನ ಈ ಕೆಳಗಿನ 21 ಹಿರಿಯ ಯಕ್ಷಗಾನ ಕಲಾವಿದರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಚಿದಂಬರ ಬಾಬು, ಕೊಣಂದೂರು, ಶಿವಮೊಗ್ಗ
ಪ್ರೊ. ಬಿ. ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಎಚ್. ಗೋವಿಂದ ಉರಾಳ, ಕೋಟ
ನಿಟ್ಟೂರು ಸುಂದರ ಶೆಟ್ಟಿ – ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಶ್ರೀ ವಸಂತ ಶೆಟ್ಟಿ, ಮುಂಡ್ಕೂರು


ಬಿ. ಜಗಜ್ಜೀವನದಾಸ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಕೆ. ಎಸ್. ಶಿವಶಂಕರ ಭಟ್, ತೀರ್ಥಹಳ್ಳಿ, ಶಿವಮೊಗ್ಗ
ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಸಂಜೀವ ಕೊಠಾರಿ, ಬೈಂದೂರು, ಉಡುಪಿ
ಕುತ್ಪಾಡಿ ಆನಂದ ಗಾಣ ಗ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಸೀತೂರು ಎಚ್. ಎಸ್. ಅನಂತ ಪದ್ಮನಾಭ ರಾವ್, ಚಿಕ್ಕಮಗಳೂರು


ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಗಣಪತಿ ಭಾಗ್ವತ, ಕಂವಾಳೆ, ಯಲ್ಲಾಪುರ
ಮಾರ್ವಿ ರಾಮಕೃಷ್ಣ ಹೆಬ್ಬಾರ, ಮಾರ್ವಿ ವಾದಿರಾಜ ಹೆಬ್ಬಾರ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಎಂ. ರಘುರಾಮ ಮಡಿವಾಳ, ಮಂದಾರ್ತಿ, ಉಡುಪಿ
ಸಿರಿಯಾರ ಮಂಜು ನಾಯ್ಕ ಸ್ಮರಣಾರ್ಥ ಪ್ರಶಸ್ತಿ : ಕೋಡಿ ಶ್ರೀ ವಿಶ್ವನಾಥ ಗಾಣಿಗ, ಹಾಲಾಡಿ


ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಅಶೋಕ ಭಟ್ಟ, ಸಿದ್ದಾಪುರ, ಉ.ಕ.
ಪಡಾರು ನರಸಿಂಹ ಶಾಸ್ತಿç ಸ್ಮರಣಾರ್ಥ ಪ್ರಶಸ್ತಿ : ಶ್ರೀ ಸುಬ್ರಾಯ ನಾರಾಯಣ ಭಂಡಾರಿ, ಗುಣವಂತೆ, ಉ.ಕ.
ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ : ಶ್ರೀ ವಿಠಲ ಕುಲಾಲ, ಚೋರಾಡಿ, ಉಡುಪಿ
ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ : ಶ್ರೀ ವೈ. ವಾಸುದೇವ ರಾವ್, ಎರ್ಮಾಳು


ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಪ್ರಭಾಕರ ಹೆಗಡೆ, ಈಚಲಕೊಪ್ಪ, ಸಾಗರ
ಮಾನ್ಯ ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಮಧೂರು ರಾಧಾಕೃಷ್ಣ ನಾವಡ, ಕಾಸರಗೋಡು
ಎಚ್. ಪರಮೇಶ್ವರ ಐತಾಳ್ ಸ್ಮರಣಾರ್ಥ ಪ್ರಶಸ್ತಿ : ಶ್ರೀ ರತ್ನಾಕರ ಆಚಾರ್ಯ, ಪಡುಬಿದ್ರೆ
ಕಡಂದೇಲು ಪುರುಷೋತ್ತಮ ಭಟ್ ಪ್ರಶಸ್ತಿ : ಗುಂಡಿಮಜಲು ಶ್ರೀ ಗೋಪಾಲ ಭಟ್ಟ, ಬಂಟ್ವಾಳ


ಕಡತೋಕ ಕೃಷ್ಣ ಭಾಗವತ್ ಪ್ರಶಸ್ತಿ : ಶ್ರೀ ತ್ರ್ಯಂಬಕ ಹೆಗಡೆ, ಇಡುವಾಣ , ಸಾಗರ
ಬಿ. ಪಿ. ಕರ್ಕೇರಾ ಪ್ರಶಸ್ತಿ : ಸಿದ್ಧಕಟ್ಟೆ ಶ್ರೀ ಸದಾಶಿವ ಶೆಟ್ಟಿಗಾರ್, ಬೆಳ್ತಂಗಡಿ
ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ : ಶ್ರೀ ಯನ್. ವಸಂತ ಗೌಡ, ಕಾಯರ್ತಡ್ಕ, ಬೆಳ್ತಂಗಡಿ
ಶ್ರೀಮತಿ ಪ್ರಭಾವತಿ ವಿ. ಶೆಣೈ – ಶ್ರೀ ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ : ಶ್ರೀ ಶ್ರೀಧರ ಪೂಜಾರಿ ಪಂಜಾಜೆ, ಬಂಟ್ವಾಳ

ಯಕ್ಷಚೇತನ ಪ್ರಶಸ್ತಿಯನ್ನು ಸಂಸ್ಥೆಯ ಹಿರಿಯ ಕಾರ್ಯಕರ್ತ ಶ್ರೀ ವಿಜಯಕುಮಾರ್ ಮುದ್ರಾಡಿ ಇವರಿಗೆ ನೀಡಲಾಗುವುದು. ಯಕ್ಷಚೇತನ ಪ್ರಶಸ್ತಿಯನ್ನು ಹೊರತು ಪಡಿಸಿ ಉಳಿದೆಲ್ಲಾ ಪ್ರಶಸ್ತಿಗಳು ತಲಾ ರೂ. 20,000/- ನಗದು ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 18, 2023 ಶನಿವಾರ ಸಂಜೆ 5.00ರಿಂದ 7.00ರ ವರೆಗೆ ಶ್ರೀ ಕ್ಷೇತ್ರ ಕಟೀಲಿನ ಸರಸ್ವತೀ ಸದನದಲ್ಲಿ ಜರಗಲಿರುವುದು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments