ತೆಂಕುತಿಟ್ಟು ಯಕ್ಷಮಾರ್ಗ -1 ನಿರಂತರ ಚಟುವಟಿಕೆಗಳು ಕೇಂದ್ರಬಿಂದುವಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ, ಸಾಂಸ್ಕೃತಿಕ ಭವನದಲ್ಲಿ ಸೆಪ್ಟೆಂಬರ್ 28ರಂದು ಸಂಜೆ 4:00ಗೆ ಗಂಟೆಗೆ ತೆಂಕುತಿಟ್ಟು ಯಕ್ಷಮಾರ್ಗ -೧ ಕಾರ್ಯಕ್ರಮ ನಡೆಯಲಿದೆ.
ಇಂದು ಯುವ ಪೀಳಿ ಯು ಯಕ್ಷಗಾನದತ್ತ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಕ್ಷಗಾನ ನಾಟ್ಯದ ವಿಶೇಷತೆ ಏನು? ಘನತೆ ಏನು? ಶಾಸ್ತ್ರೀಯತೆ ,ಎಂಬಿತ್ಯಾದಿ ವಿಚಾರವಾಗಿ ನಾಟ್ಯದ ಸೂಕ್ಷ್ಮತೆ ಮೂಲಪಾಠ, ಸಪ್ತ ತಾಳಗಳ ನಾಟ್ಯ ವೈಶಿಷ್ಟ್ಯ, ಇತ್ಯಾದಿಗಳ ಬಗ್ಗೆ ಶಾಸ್ತ್ರೀಯವಾಗಿ ಯಕ್ಷಗಾನದ ಹಿರಿಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳು ಇವರಿಂದ ಪ್ರಾತ್ಯಕ್ಷಿಕೆ ನಡೆಯಲಿದೆ.
ಇಂದಿನ ಯಕ್ಷಗಾನದ ನಾಟ್ಯ ಶಿಕ್ಷಕರು, ಹವ್ಯಾಸಿ ಕಲಾವಿದರು, ವೃತ್ತಿ ಕಲಾವಿದರು, ಅಭ್ಯಸಿಸುವ ವಿದ್ಯಾರ್ಥಿಗಳು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರತಿಷ್ಠಾನದ ವಿನಮ್ರ ವಿನಂತಿ.