
ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ಅಧ್ಯಯನ ಯೋಗ್ಯ ಕಾರ್ಯಕ್ರಮ ನ್ನು ಆಯೋಜಿಸಿ ಯಶಸ್ವಿ ಯಾಗುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಮಣಿ ಕೃಷ್ಣ ಸ್ವಾಮಿ ಅಕಾಡಮಿಯವರ ಸಹಯೋಗ ದೊಂದಿಗೆ ದಿನಾಂಕ 29 ರಂದು ಶನಿವಾರ ಅಕಾಡಮಿಯ14 ನೇ ಶ್ರೀ ಧರ್ಮಸ್ಥಳ ಕ್ಷೇತ್ರ ಸಂಬಂದಿತ ಕೃತಿಗಳ ಸಂಗೀತ ಕಛೇರಿಯು ನಡೆಯಲಿದೆ.
ಸಂಜೆ 5 ಗಂಟೆಗೆ ನಡೆಯುವ ಸಂಗೀತ ಕಛೇರಿ ಯಲ್ಲಿ ಶ್ರೇಯಾ ಕೊಳತ್ತಾಯ, ಮೇಧಾ ಉಡುಪ, ಶರಣ್ಯಾ ಕೆ ಯನ್ ,ಸುಮೇಧಾ ಕೆ ಯನ್ ಹಾಡುಗಾರಿಕೆಯಲ್ಲಿ, ತನ್ಮಯಿ ಉಪ್ಪಂಗಳ ವಯೊಲಿನ್,ಕೌಶಿಕ್ ರಾಮಕೃಷ್ಣ ಮೃದಂಗ ದಲ್ಲಿ ಭಾಗವಹಿಸಲಿದ್ದಾರೆ.
ಅಪರಾಹ್ನ 2-30 ರಿಂದ ಸ್ಥಳೀಯ ಸಂಗೀತ ಅಭ್ಯಾಸಿಗಳಿಗೆ ಎರಡು ಕೃತಿಗಳನ್ನು ಕಲಿಸಿಕೊಡಲಾಗುವುದು. ಸಂಗೀತ ಅಸಕ್ತರಿಗೆ ಮುಕ್ತ ಪ್ರವೇಶವಿದೆ.