ಕಟೀಲು ಸರಸ್ವತಿ ಸದನದಲ್ಲಿ ಕೃಷ್ಣ ಸಂಧಾನ, ಸೈಂಧವ ವಧೆ, ದುಶ್ಶಾಸನ ವಧೆ, ಕರ್ಣ ಪರ್ವ ಯಕ್ಷಗಾನ, ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಮಂಡೆಚ್ಚ ಪ್ರಶಸ್ತಿ ಪ್ರದಾನ ಮತ್ತು ಕುಬಣೂರು ಶ್ರೀಧರ ರಾವ್ ಸಂಸ್ಮರಣೆ ನಡೆಯಲಿದೆ.
ದಿನಾಂಕ 15.07.2023ನೇ ಶನಿವಾರ ಸಂಜೆ 4 ಘಂಟೆಯಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಖ್ಯಾತ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ ಮಂಡೆಚ್ಚ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ನಂತರ ಕೀರ್ತಿಶೇಷ ಭಾಗವತರಾದ ದಿ| ಕುಬಣೂರು ಶ್ರೀಧರ ರಾವ್ ಅವರ ಸಂಸ್ಮರಣೆ ನಡೆಯಲಿದೆ.
ನಂತರ ಕೃಷ್ಣ ಸಂಧಾನ, ಸೈಂಧವ ವಧೆ, ದುಶ್ಶಾಸನ ವಧೆ, ಕರ್ಣ ಪರ್ವ ಯಕ್ಷಗಾನ ಪ್ರದರ್ಶನ ನಡೆಯಲಿದೆ.
