Tuesday, July 9, 2024
Homeಸುದ್ದಿಕುಂಬಳೆ ಪಾರ್ತಿಸುಬ್ಬ ವಿರಚತ ʼಪಂಚವಟಿʼ - ಯಕ್ಷಗಾನ ಪ್ರದರ್ಶನ

ಕುಂಬಳೆ ಪಾರ್ತಿಸುಬ್ಬ ವಿರಚತ ʼಪಂಚವಟಿʼ – ಯಕ್ಷಗಾನ ಪ್ರದರ್ಶನ

” ಸ್ವಸ್ತಿಶ್ರೀ ” ಕಲಾ ಪ್ರತಿಷ್ಟಾನ ಎಡನಾಡು – ಕುಂಬಳೆ : 671 321, ಇವರು ದಿನಾಂಕ 15-06-2023 ಗುರುವಾರ ರಾತ್ರಿ ಘ೦ಟೆ 8 ರಿಂದ ಶ್ರೀ ಶಂಕರ ರೈ ಮಾಸ್ಟರ್ ನೇತೃತ್ವದಲ್ಲಿ ಯಕ್ಷಗಾನ ಕಲಾವಿದ, ಯಕ್ಷಗುರು ಶ್ರೀ ಶಿವಶಂಕರ ಭಟ್ ದಿವಾಣ ನಿರ್ಧೇಶನದಲ್ಲಿ ಕೇರಳದ ಸಾಂಸ್ಕೃತಿಕ ರಾಜದಾನಿ ತ್ರಿಶೂರ್ ನ ಭಾರತ್ ಭವನದಲ್ಲಿ ನಡೆಯಲಿದೆ.

ಯಕ್ಷಗಾನ ವಾಲ್ಮೀಕಿ, ಕುಂಬಳೆ ಪಾರ್ತಿಸುಬ್ಬ ವಿರಚತ ʼಪಂಚವಟಿʼ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ

ಸ್ಥಳ – ಕೇರಳದ ಸಾಂಸ್ಕೃತಿಕ ರಾಜದಾನಿ ತ್ರಿಶೂರ್ ನ ಭಾರತ್ ಭವನ: ರಿಮೆಂಬರ್ರೆನ್ಸ್ ತಿಯೇಟರ್ ಗ್ರೂಪ್ ‘ ಜೊಸ್ ಚಿರಮ್ಮಲ್ ನಾಟಕ ದ್ವೀಪ್ ‘ಮೋಸ್ಕೋ ನಗರ್, ತೈಕಾಟು ಷೇರಿ, ವಲ್ಲಾಚಿರ (ತ್ರಿಶೂರ್ )

ಹಿಮ್ಮೇಳ : ಭಾಗವತರು: ಶ್ರೀ ಸಚಿನ್ ಶೆಟ್ಟಿ ಕುದುರೆಪ್ಪಾಡಿ, ಚೆಂಡೆ ಮತ್ತು ಮದ್ದಳೆ ವಾದಕರಾಗಿ: ಶ್ರೀ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಮತ್ತುಶ್ರೀ ಶ್ರೀ ಸ್ಕಂದ ದಿವಾಣ ಪಾತ್ರ ಪರಿಚಯ : ಶ್ರೀರಾಮ – ಶ್ರೀ ನವೀನಚಂದ್ರಶರ್ಮ ಕುಂಬಳೆ, ಲಕ್ಷ್ಮಣ: ಶ್ರೀ ಯತೀಶ್ ಕುಲಾಲ್ ಕುಂಬಳೆ, ಸೀತೆ: ಕುಮಾರಿ ಚೈತ್ರ ಪಿ ಜಿ ಬೆದ್ರಡ್ಕ , ಘೋರ ಶೂರ್ಪನಖಿ : ಶ್ರೀ ರಂಜಿತ್ ಮಲ್ಲ, : ಮಾಯಾ ಶೂರ್ಪನಖಿ: ಕುಮಾರಿ ಶ್ರಾವ್ಯ ಬೆದ್ರಡ್ಕ , ಖರಾಸುರ: ಶ್ರೀ ಶಿವಶಂಕರ ಭಟ್ ದಿವಾಣ, ತ್ರಿಶಿರಾಸುರ: ಶ್ರೀ ಶೇಖರ ಜಯನಗರ : ವೇಷ ಭೂಷಣ ಸಹಕಾರ: ಶ್ರೀ ರಾಕೇಶ್ ಗೋಳಿಯಡ್ಕ, ಶ್ರೀ ದುರ್ಗಾ ವೇಷ ಭೂಷಣ ಮಲ್ಲ ಮೊದಲಾದವರು ಭಾಗವಹಿಸಲಿದ್ದಾರೆ.

ಶಿವಶಂಕರ ಭಟ್ ದಿವಾಣ , ಸ್ವಸ್ತಿಶ್ರೀ ಕಲಾ ಪ್ರತಿಷ್ಟಾನ ‘ಎಡ ನಾಡು ಸರ್ವರ ಶುಭ ಹಾರೈಕೆಗಳೊಂದಿಗೆ ಪ್ರೋತ್ಸಾಹವನ್ನು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments