” ಸ್ವಸ್ತಿಶ್ರೀ ” ಕಲಾ ಪ್ರತಿಷ್ಟಾನ ಎಡನಾಡು – ಕುಂಬಳೆ : 671 321, ಇವರು ದಿನಾಂಕ 15-06-2023 ಗುರುವಾರ ರಾತ್ರಿ ಘ೦ಟೆ 8 ರಿಂದ ಶ್ರೀ ಶಂಕರ ರೈ ಮಾಸ್ಟರ್ ನೇತೃತ್ವದಲ್ಲಿ ಯಕ್ಷಗಾನ ಕಲಾವಿದ, ಯಕ್ಷಗುರು ಶ್ರೀ ಶಿವಶಂಕರ ಭಟ್ ದಿವಾಣ ನಿರ್ಧೇಶನದಲ್ಲಿ ಕೇರಳದ ಸಾಂಸ್ಕೃತಿಕ ರಾಜದಾನಿ ತ್ರಿಶೂರ್ ನ ಭಾರತ್ ಭವನದಲ್ಲಿ ನಡೆಯಲಿದೆ.
![](https://yakshadeepa.com/wp-content/uploads/2023/04/VC_PUC_Hoardings_8x10-1.jpg)
ಯಕ್ಷಗಾನ ವಾಲ್ಮೀಕಿ, ಕುಂಬಳೆ ಪಾರ್ತಿಸುಬ್ಬ ವಿರಚತ ʼಪಂಚವಟಿʼ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ
![](https://yakshadeepa.com/wp-content/uploads/2023/04/IMG-20221018-WA0056.jpg)
ಸ್ಥಳ – ಕೇರಳದ ಸಾಂಸ್ಕೃತಿಕ ರಾಜದಾನಿ ತ್ರಿಶೂರ್ ನ ಭಾರತ್ ಭವನ: ರಿಮೆಂಬರ್ರೆನ್ಸ್ ತಿಯೇಟರ್ ಗ್ರೂಪ್ ‘ ಜೊಸ್ ಚಿರಮ್ಮಲ್ ನಾಟಕ ದ್ವೀಪ್ ‘ಮೋಸ್ಕೋ ನಗರ್, ತೈಕಾಟು ಷೇರಿ, ವಲ್ಲಾಚಿರ (ತ್ರಿಶೂರ್ )
ಹಿಮ್ಮೇಳ : ಭಾಗವತರು: ಶ್ರೀ ಸಚಿನ್ ಶೆಟ್ಟಿ ಕುದುರೆಪ್ಪಾಡಿ, ಚೆಂಡೆ ಮತ್ತು ಮದ್ದಳೆ ವಾದಕರಾಗಿ: ಶ್ರೀ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಮತ್ತುಶ್ರೀ ಶ್ರೀ ಸ್ಕಂದ ದಿವಾಣ ಪಾತ್ರ ಪರಿಚಯ : ಶ್ರೀರಾಮ – ಶ್ರೀ ನವೀನಚಂದ್ರಶರ್ಮ ಕುಂಬಳೆ, ಲಕ್ಷ್ಮಣ: ಶ್ರೀ ಯತೀಶ್ ಕುಲಾಲ್ ಕುಂಬಳೆ, ಸೀತೆ: ಕುಮಾರಿ ಚೈತ್ರ ಪಿ ಜಿ ಬೆದ್ರಡ್ಕ , ಘೋರ ಶೂರ್ಪನಖಿ : ಶ್ರೀ ರಂಜಿತ್ ಮಲ್ಲ, : ಮಾಯಾ ಶೂರ್ಪನಖಿ: ಕುಮಾರಿ ಶ್ರಾವ್ಯ ಬೆದ್ರಡ್ಕ , ಖರಾಸುರ: ಶ್ರೀ ಶಿವಶಂಕರ ಭಟ್ ದಿವಾಣ, ತ್ರಿಶಿರಾಸುರ: ಶ್ರೀ ಶೇಖರ ಜಯನಗರ : ವೇಷ ಭೂಷಣ ಸಹಕಾರ: ಶ್ರೀ ರಾಕೇಶ್ ಗೋಳಿಯಡ್ಕ, ಶ್ರೀ ದುರ್ಗಾ ವೇಷ ಭೂಷಣ ಮಲ್ಲ ಮೊದಲಾದವರು ಭಾಗವಹಿಸಲಿದ್ದಾರೆ.
ಶಿವಶಂಕರ ಭಟ್ ದಿವಾಣ , ಸ್ವಸ್ತಿಶ್ರೀ ಕಲಾ ಪ್ರತಿಷ್ಟಾನ ‘ಎಡ ನಾಡು ಸರ್ವರ ಶುಭ ಹಾರೈಕೆಗಳೊಂದಿಗೆ ಪ್ರೋತ್ಸಾಹವನ್ನು ಕೋರಿದ್ದಾರೆ.
- ನಾಳೆ ದಿನಾಂಕ 06.07.2024 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ
- ಖ್ಯಾತ ಯಕ್ಷಗಾನ ವೇಷಧಾರಿ ಕುಂಬಳೆ ಶ್ರೀಧರ ರಾವ್ ಇನ್ನಿಲ್ಲ – ಕುಂಬಳೆ ಶ್ರೀಧರ ರಾಯರ ಕಲಾಜೀವನದ ಮೇಲೊಂದು ಇಣುಕು ನೋಟ
- ಖ್ಯಾತ ಯಕ್ಷಗಾನ ಪ್ರಸಾದನ ತಜ್ಞ, ವೇಷಭೂಷಣಗಳ ನಿರ್ಮಾಪಕ ನಿಧನ
- ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ
- ಶ್ರೀಮತಿ ಪರಿಣಯ, ಇಂದ್ರಕೀಲಕ, ಉತ್ತರ ಗೋಗ್ರಹಣ, ಶರಸೇತು ಬಂಧನ – ಕಟೀಲಿನಲ್ಲಿ ನಾಲ್ಕು ದಿನಗಳಲ್ಲಿ ನಾಲ್ಕು ಯಕ್ಷಗಾನ ಪ್ರದರ್ಶನಗಳು