
ದಿನಾಂಕ 23-04-2023ನೇ ಆದಿತ್ಯವಾರ ನಾದಾಮೃತ ಕಲಾದೀವಿಗೆ ಪಾರಂಪಳ್ಳಿ ಸಾಲಿಗ್ರಾಮದಲ್ಲಿ ದಿ | ನಗರ ಸುಬ್ರಹ್ಮಣ್ಯ ಆಚಾರ್ ಸ್ಮರಣಾರ್ಥ ನಾದಾಮೃತ – ಯಕ್ಷಗಾನ ನಾಟ್ಯ ರಸದೌತಣ – ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಹಿರಿಯ ಚೆಂಡೆವಾದಕರಾದ ಶ್ರೀ ರಾಮಕೃಷ್ಣ ಮಂದಾರ್ತಿ ಇವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಆಮೇಲೆ ಯಕ್ಷಗಾನ ನಾಟ್ಯ ರಸದೌತಣ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಆಯೋಜಕರಾದ ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ ಅವರು ಕಲಾಭಿಮಾನಿಗಳನ್ನು ಆದರದಿಂದ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ಗಮನಿಸಿ.