ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ರಥಬೀದಿ ಮಂಗಳೂರು ಯುಗಾದಿ ಮಹೋತ್ಸವದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀಕಾಳಿಕಾಂಬಾ ರಂಗಮಂಟಪದಲ್ಲಿ ದಿನಾಂಕ 24.3.2023 ರಂದು ಶ್ರೀ ಕಾಳಿಕಾಂಬ ವಿನಾಯಕ ಯಕ್ಷಗಾನ ಸಂಘ ಮಂಗಳೂರು ಪ್ರಾಯೋಜಕತ್ವದಲ್ಲಿ ಭೀಷ್ಮ ವಿಜಯ ತಾಳಮದ್ದಳೆ ಜರಗಿತು.
ಭಾಗವತರಾಗಿ ಕುಮಾರಿ ಶ್ರೇಯಾ ಅಲಂಕಾರು, ಕುಮಾರಿ ಪ್ರಜ್ಞಾ ಉಪ್ಪಿನಂಗಡಿ ಹಿಮ್ಮೇಳದಲ್ಲಿ ಕು.ಶ್ರಾವ್ಯ ತಳಕಲ ಮತ್ತು ಕು.ಅತಿಶಯ ರಾವ್ ಮತ್ತು ಅರ್ಥದಾರಿಗಳಾಗಿ ಮಾಣಿ ಸತೀಶ್ ಆಚಾರ್ಯ (ಭೀಷ್ಮ) ದಿವಾಕರ ಆಚಾರ್ಯ ಗೇರುಕಟ್ಟೆ (ಪರಶುರಾಮ) ಶ್ರೀಮತಿ ಹರ್ಷಿತಾ,ಉಪನ್ಯಾಸಕಿ ಪುತ್ತೂರು(ಆಕೃತವ್ರಣ) ಭಾಗವಹಿಸಿದ್ದರು.
ಸಮಿತಿಯ ಸಹ ಸಂಚಾಲಕರಾದ ಶಾಮ್ ಆಚಾರ್ಯ ಸ್ವಾಗತಿಸಿ ಸಂಚಾಲಕರಾದ ಟಿ. ಜಯಕರ ಆಚಾರ್ಯ ಧನ್ಯವಾದ ಅರ್ಪಿಸಿದರು.