ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಸಂಪಾಜೆ ಯಕ್ಷೋತ್ಸವ ಎಂದೇ ಖ್ಯಾತಿ ಪಡೆದಿರುವ ಸಂಪಾಜೆ ಕಲ್ಲುಗುಂಡಿ ಯಕ್ಷಗಾನ ಪ್ರದರ್ಶನವು ಇಂದು (11.03.2023) ಸಂಜೆ 4 ಘಂಟೆಯಿಂದ ಆರಂಭವಾಗಲಿದೆ.
ಪ್ರಸಂಗ ನಾಳೆ ಬೆಳಗ್ಗೆ ಏಳು ಘಂಟೆಯ ವರೆಗೆ ನಡೆಯಲಿದೆ.
ಬ್ರಹ್ಮೈಕ್ಯ ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.
ಕಾರ್ಯಕ್ರಮದ ಸಂಪೂರ್ಣ ವಿವರ ಮೇಲಿದೆ.