ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ಕಲಾವಿದರಾಗಿ, ಅರ್ಥಧಾರಿಗಳಾಗಿ ಕಲಾ ಸೇವೆ ಮಾಡಿದ ಸಹೋದರತ್ರಯದರಾದ ದಿವಂಗತ ಗಣಪತಿ ಆಚಾರ್ಯ ನೇರೆಂಕಿ, ವಿಠಲಾಚಾರ್ಯ ನೆಲ್ಯಾಡಿ, ಭಾಸ್ಕರ್ ಆಚಾರ್ಯ ಉಪ್ಪಿನಂಗಡಿ ಇವರ ಎರಡನೇ ವರ್ಷದ ಸಂಸ್ಮರಣ ಕಾರ್ಯಕ್ರಮವು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ತಹಶೀಲ್ದಾರ್ ರಾಘವೇಂದ್ರ ಆಚಾರ್ಯ ಬಾರ್ಯ ವಹಿಸಿದ್ದರು.
ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಕಲಾವಿದರ ಸಂಸ್ಮರಣೆಯನ್ನು ಮಾಡಿ ಕಲಾಕ್ಷೇತ್ರದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿದರು.
ಸಂಸ್ಮರಣೆ ಅಂಗವಾಗಿ ಯುವ ಭಾಗವತ ಪದ್ಮನಾಭ ಕುಲಾಲ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಮಕುಂಜ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬಳೆ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಸತೀಶ್ ಆಚಾರ್ಯ ಮಾಣಿ, ಸಂಜೀವ ಪಾರೆಂಕಿ, ಗೋಪಾಲ್ ಶೆಟ್ಟಿ ಕಳೆಂಜ, ಹರೀಶ್ ಆಚಾರ್ಯ ಸುರತ್ಕಲ್, ಶ್ರೀಪತಿ ಭಟ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಗಂಗಾಧರ ಆಚಾರ್ಯ ನೇರೆಂಕಿ ಸ್ವಾಗತಿಸಿ, ಮುರಳಿಧರ ಆಚಾರ್ಯ ಬಂಟ್ವಾಳ ವಂದಿಸಿದರು . ಹರೀಶ್ ಆಚಾರ್ಯ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶಿವಭಕ್ತ ವೀರಮಣಿ ತಾಳಮದ್ದಳೆ ಜರಗಿತು. ಭಾಗವತರಾಗಿ ಡಿ.ಕೆ ಆಚಾರ್ಯ ನೇರೆಂಕಿ, ಬಿ.ವೆಂಕಟರಮಣ ರಾವ್ ಉಜಿರೆ, ಪದ್ಮನಾಭ ಕುಲಾಲ್ ಇಲಂತಿಲ ಹಿಮ್ಮೇಳದಲ್ಲಿ ಮೋಹನ ಅಲಂಕಾರ್, ಶ್ರೀಪತಿ ಭಟ್ ಉಪಿನಂಗಡಿ, ಮುರಳೀಧರ ಆಚಾರ್ಯ ಅರ್ಥದಾರಿಗಳಾಗಿ ಗಣರಾಜ ಕುಂಬ್ಳೆ(ಈಶ್ವರ) ದಿವಾಕರ್ ಆಚಾರ್ಯ ಗೇರುಕಟ್ಟೆ,(ವೀರಮಣಿ) ಗುಡ್ಡಪ್ಪ ಬಲ್ಯ, ಗೋಪಾಲ ಶೆಟ್ಟಿ ಕಲೆಂಜ(ಹನುಮಂತ) ಹರೀಶ ಬಾರ್ಯ(ಶ್ರೀ ರಾಮ), ದಿವಾಕರ ಆಚಾರ್ಯ ನೇರೆಂಕಿ (ಶತ್ರುಘ್ನ) ಭಾಗವಹಿಸಿದ್ದರು.

- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
