ಇದೇ ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ನಡೆಯಲಿರುವ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನದ ಸಂದರ್ಭದಲ್ಲಿ 75 ಜನ ಸಾಧಕರಿಗೆ ‘ಸಮ್ಮೇಳನ ಸಮ್ಮಾನ’ ನೀಡಲಿದ್ದು,
ಯಕ್ಷಗಾನದಲ್ಲಿ ಸಂಶೋಧನೆ ಮಾಡಿ ಪ್ರಥಮ ಪಿ.ಎಚ್.ಡಿ ಪದವೀಧರೆ ಎನಿಸಿಕೊಂಡ ಡಾ. ಮಾರ್ತಾ ಏಸ್ಟನ್ ಸಿಕೋರ ಸಂಮಾನಿತರಲ್ಲಿ ಓರ್ವರಾಗಿದ್ದು, ಇವರು ತೀವ್ರ ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು,
ಅವರ ಪತಿ ಶ್ರೀ ಬಾಬ್ ಸಿಕೋರ ಇವರಿಗೆ ಇಂದು ಶ್ರೀ ಆನಂದ ಹಾಸ್ಯಗಾರ ಅವರು ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿರುವ ಅವರ ಮನೆಗೆ ಹೋಗಿ ಆಮಂತ್ರಣ ಪತ್ರವನ್ನು ನೀಡಿದರು.