ನಾಳೆ ದಿನಾಂಕ 07.02.2023, ಮಂಗಳವಾರದಿಂದ ರಾಮಾಯಣದ ವಿವಿಧ ಪ್ರಸಂಗಗಳ ತಾಳಮದ್ದಳೆ ಸಪ್ತಾಹ ನಡೆಯಲಿದೆ.
ಅಶ್ವತ್ಥಪುರದ ಶ್ರೀ ಬಹ್ಮಾನಂದ ಸದನದಲ್ಲಿ ನಾಳೆಯಿಂದ ( 07.02.2023) ಏಳು ದಿನಗಳ ಕಾಲ ಪ್ರತಿದಿನ ಸಂಜೆ 4.45 ಘಂಟೆಗೆ ತಾಳಮದ್ದಳೆ ಆರಂಭವಾಗಲಿದೆ.
ರಾಮಾಯಣದ ವಿವಿಧ ಪ್ರಸಂಗಗಳಾದ ಯಜ್ಞ ಸಂರಕ್ಷಣೆ-ಅಹಲ್ಯೋದ್ಧಾರ-ಸೀತಾಕಲ್ಯಾಣ, ವನಗಮನ-ಪಾದುಕಾಪ್ರದಾನ, ಮಾರೀಚನೀತಿ-ಸೀತಾಪಹಾರ, ರಾಮದರ್ಶನ-ಸುಗ್ರೀವಸಖ್ಯ, ವಾಲಿಮೋಕ್ಷ-ಚೂಡಾಮಣಿ-ವಿಭೀಷಣ ಪ್ರಪತ್ತಿ, ಕುಂಭಕರ್ಣ-ಅತಿಕಾಯ-ಇಂದ್ರಜಿತು-ರಾವಣವಧೆ, ಅಗ್ನಿಪರೀಕ್ಷೆ-ರಾಮೇಶ್ವರ ಕ್ಷೇತ್ರ ಮಹಾತ್ಮೆ-ನಿಜಪಟ್ಟಾಭಿಷೇಕ ಎಂಬ ಕಥಾನಕಗಳು ತಾಳಮದ್ದಳೆ ರೂಪದಲ್ಲಿ ಪ್ರಸ್ತುತಿಯಾಗಲಿದೆ.
ಕಲಾವಿದರ ವಿವರಗಳಿಗೆ ಚಿತ್ರ ನೋಡಿ