Saturday, September 21, 2024
Homeಸುದ್ದಿಯಕ್ಷದೇಗುಲದ ಸೈಂಧವ ವಧೆ ಯಕ್ಷಗಾನ ಪ್ರದರ್ಶನ

ಯಕ್ಷದೇಗುಲದ ಸೈಂಧವ ವಧೆ ಯಕ್ಷಗಾನ ಪ್ರದರ್ಶನ

ದಿನಾಂಕ: 18-12-2022ರಂದು ಮಧ್ಯಾಹ್ನ 3.00ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೌಕೂರು ಕುಂದಾಪುರ ಇಲ್ಲಿ ಬಣ್ಣದ ಸಕ್ಕಟ್ಟು ಮತ್ತು ರಾಜಋಷಿ ರವೀಂದ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷದೇಗುಲ ಬೆಂಗಳೂರು ತಂಡದವರಿದ “ಸೈಂಧವ ವಧೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ.


ಪ್ರಸಂಗದ ನೆಡೆ, ಹಿಮ್ಮೇಳ, ವೇಷಭೂಷಣ, ಮುಖವರ್ಣಿಕೆ, ಕಟ್ಟುಮೀಸೆ ಹೀಗೆ ಆದಷ್ಟು ಪರಂಪರೆಯ ಹತ್ತಿರ ಕೊಂಡೊಯ್ಯುವ ನಿಟ್ಟಿನಲ್ಲಿ ನಿರ್ದೇಶನ ಕೆ. ಮೋಹನ್, ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಕಲಾವಿದರಾಗಿ-ವಿದ್ವಾಂಸರಾದ ಸುಜಯೀಂದ್ರ ಹಂದೆ ಎಚ್, ಚಂದ್ರಕಾಂತ್ ಮೂಡುಬೆಳ್ಳೆ ಸುಧೀರ್ ಭಟ್,

ರಾಘವೇಂದ್ರ ಹೆಗಡೆ, ಮಂಜುನಾಥ ನಾವಡ, ಸುದೀಪ್ ಉರಾಳ, ತಮ್ಮಣ್ಣ ಗಾಂವ್ಕರ್, ಆದಿತ್ಯ ಹೆಗಡೆ, ಸ್ಪೂರ್ತಿ ಭಟ್, ಅಶೋಕ ಆಚಾರ್ಯ ಸಾಬ್ರಕಟ್ಟೆ, ರಮೇಶ್ ಶೃಂಗೇರಿ, ರಾಘವೇಂದ್ರ ತುಂಗ, ಸುಹಾಸ್ ಕರಬ, ನರಸಿಂಹ ತುಂಗ, ಸ್ಕಂದ ಉರಾಳ, ರಾಜು ಪೂಜಾರಿ ಇನ್ನಿತರರು ಭಾಗವಹಿಸಲಿದ್ದಾರೆಂದು ಸುದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಕೋಟ ಸುದರ್ಶನ ಉರಾಳ
ಮೊ. 9448547237

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments