

ಬೆಂಗಳೂರಿನ ಹೊರಮಾವು ಎಂಬಲ್ಲಿ ಯುವತಿ ಕೃಷ್ಣಕುಮಾರಿಯನ್ನು ಆಕೆಯ ಲೈವ್ ಇನ್ ಜೀವನ ಸಂಗಾತಿ ಸಂತೋಷ್ ಧಾಮಿ ಅವರು ತೀವ್ರ ಜಗಳದ ನಂತರ ಗೋಡೆಗೆ ತಲೆ ಬಡಿದು ಹತ್ಯೆ ಮಾಡಿದ್ದಾನೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಎಸ್ ಗುಳೇದ್ ಹೇಳಿದ್ದಾರೆ.
ಜಗಳದ ನಂತರ ನೇಪಾಳಿ ಪ್ರಜೆಯೊಬ್ಬ ತನ್ನ ಸಂಗಾತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ರಾಮಮೂರ್ತಿನಗರದ ಟಿಸಿ ಪಾಳ್ಯದಲ್ಲಿ ಬುಧವಾರ ನಡೆದಿದೆ.
ಮೃತರನ್ನು ಕೃಷ್ಣಕುಮಾರಿ (23) ಮತ್ತು ಆರೋಪಿ ಸಂತೋಷ್ ಧಾಮಿ (27) ಎಂದು ಗುರುತಿಸಲಾಗಿದೆ. ಕೃಷ್ಣಕುಮಾರಿ ಹೊರಮಾವುನಲ್ಲಿರುವ ಯುನಿಸೆಕ್ಸ್ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದರೆ, ಸಂತೋಷ್ ಟಿಸಿ ಪಾಳ್ಯದ ಪುರುಷರ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದ.
ಇಬ್ಬರೂ ಪ್ರೀತಿಸುತ್ತಿದ್ದು, ಟಿಸಿ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೂಲತಃ ನೇಪಾಳ ದೇಶದವರಾಗಿದ್ದ ಇಬ್ಬರೂ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು.
ಬುಧವಾರ ಬೆಳಗ್ಗೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೋಪದ ಭರದಲ್ಲಿ ಸಂತೋಷ್ ಕೃಷ್ಣಕುಮಾರಿಯನ್ನು ಕೊಂದಿದ್ದಾನೆ. ಪೊಲೀಸರು ಸ್ಥಳದಲ್ಲಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.