

ಉಡುಪಿ :ಯಕ್ಷಗಾನ ಆಟ-ಕೂಟಗಳಲ್ಲಿ ಕಳೆದ 6 ದಶಕಗಳಿಂದ ಮೇರುಕಲಾವಿದರಾಗಿ ಮೆರೆದ, ಶಾಸಕರಾಗಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಕಲೆ ಮತ್ತು ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ ಕುಂಬ್ಳೆ ಸುಂದರ ರಾವ್ ಅವರು
ದಿನಾಂಕ 30-11-2022ರಂದು ನಿಧನ ಹೊಂದಿದ್ದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಇವರ ಸದ್ಗತಿಗಾಗಿ ಪ್ರಾರ್ಥಿಸಿ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ನಿಮಿತ್ತ ನಾಳೆ (01-12-2022, ಗುರುವಾರ) ಸಂಜೆ 5.30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂತಾಪ ಸಭೆಯನ್ನು ಆಯೋಜಿಸಲಾಗಿದೆ. ಅವರ ಅಭಿಮಾನಿಗಳು ಪಾಲ್ಗೊಳ್ಳಬೇಕಾಗಿ ಯಕ್ಷಗಾನ ಕಲಾರಂಗ ವಿನಂತಿಸಿಕೊಂಡಿದೆ.