ಮುಂಬಯಿ : ನ.16 ಯಕ್ಷಗಾನ ಕಲಾವಿದ , ಕಲಾಸೇವಕ ದಿನೇಶ್ ಶೆಟ್ಟಿ ವಿಕ್ರೋಲಿ ನಿಧರಾಗಿದ್ದಾರೆ.
ಅವರು ನಗರದ ಜನಪ್ರಿಯಾ ಯಕ್ಷಗಾನ ಗುರು , ಸಂಘಟಕ ಬಾಲಕೃಷ್ಣ ಶೆಟ್ಟಿ ಅಜೆಕಾರು ಇವರ ಮುಂದಾಳತ್ವದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಹಾಗೂ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಅಸಲ್ಪ ಘಾಟ್ಕೋಪರ್ ಈ ಕಲಾ ಸಂಸ್ಥೆಗಳ ಮುಖಾಂತರ ಜರಗುತ್ತಿದ್ದ ಎಲ್ಲಾ ಯಕ್ಷಗಾನ ಪ್ರದರ್ಶನಗಳಿಗೆ ಹಿನ್ನಲೆ ಸಹಕಾರವನ್ನು ನೀಡುತ್ತಿದ್ದ
ಮತ್ತು ಸಮಯ ಸಂದರ್ಭಕ್ಕನುಗಣವಾಗಿ ಸಣ್ಣ , ಪುಟ್ಟ ವೇಷವನ್ನು ಮಾಡಿ ಈ ಮೂಲಕ ಯಕ್ಷಗಾನ ಕಲಾಸೇವಾ ನಿರತರಾಗಿದ್ದರು. ದಿನೇಶ್ ಶೆಟ್ಟಿ ವಿಕ್ರೋಲಿ ಇವರು ಇಂದು ಅಂದರೆ ನ.16 ರ ಬುಧವಾರ ದೈವಾಧೀನರಾದರು.
ಅವರ ಆತ್ಮಕ್ಕೆ ಭಗವಂತನು, ಕಲಾಮಾತೆ ಸರಸ್ವತಿಯು ಚಿರಶಾಂತಿಯನ್ನು ಕರುಣಿಸಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

