43 ವರ್ಷದ ವ್ಯಕ್ತಿಯೊಬ್ಬರು ದಕ್ಷಿಣ ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಛೇರಿಯಾದ ಮಂತ್ರಾಲಯದ 6 ನೇ ಮಹಡಿಯಿಂದ ಜಿಗಿದರು, ಆದರೆ ಅವರು ಅಲ್ಲಿ ಅಳವಡಿಸಿದ್ದ ಸುರಕ್ಷತಾ ನೆಟ್ (ಬಲೆ) ನಲ್ಲಿ ಸಿಲುಕಿಕೊಂಡು ರಕ್ಷಿಸಲ್ಪಟ್ಟರು.

ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. 43 ವರ್ಷದ ವ್ಯಕ್ತಿಯೊಬ್ಬರು ಗುರುವಾರ ದಕ್ಷಿಣ ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಚೇರಿಯಾದ ಮಂತ್ರಾಲಯದ 6 ನೇ ಮಹಡಿಯಿಂದ ಜಿಗಿದಿದ್ದಾರೆ. ಜಿಗಿಯುವಾಗ ಪ್ಲೈವುಡ್ಗೆ ತಗುಲಿದ ಕಾರಣ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾದರೂ, ಸುರಕ್ಷತಾ ಜಾಲದಿಂದಾಗಿ ಆತ ಬದುಕುಳಿದಿದ್ದಾನೆ.
ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದ್ದು, ನಂತರ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಾಪು ನಾರಾಯಣ ಮೊಕಾಶಿ ಎಂದು ಗುರುತಿಸಲಾದ ವ್ಯಕ್ತಿ ಬೀಡ್ ಜಿಲ್ಲೆಯ ನಿವಾಸಿಯಾಗಿದ್ದು, ತನ್ನ ಗೆಳತಿ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಹೇಳಿಕೊಂಡಿದ್ದಾನೆ, ನಂತರ ಅವಳು 2018 ರಲ್ಲಿ ನೇಣು ಹಾಕಿಕೊಂಡಿದ್ದಾಳೆ.
ಅಂದಿನಿಂದ, ಅವನು ತನ್ನ ಗೆಳತಿಗೆ ನ್ಯಾಯವನ್ನು ಪಡೆಯಲು ನಿರಂತರವಾಗಿ ಕಚೇರಿಗಳಿಗೆ ಅಲೆಯುತ್ತಿದ್ದನು. ಆದರೆ ಯಾವುದೇ ನ್ಯಾಯವನ್ನು ಪಡೆಯಲು ವಿಫಲನಾಗಿದ್ದನು. ಪ್ರಕರಣದ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದನು.
ಹೀಗಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಲು ಗುರುವಾರ ಮಧ್ಯಾಹ್ನ 3 ಗಂಟೆಗೆ ಮಂತ್ರಾಲಯ ತಲುಪಿದ್ದರು ಆದರೆ ಸಂಪುಟ ಸಭೆಯ ಕಾರಣ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.
ವ್ಯಕ್ತಿ ಜಿಗಿದ ಆದರೆ ಅದೃಷ್ಟವಶಾತ್ ಕಟ್ಟಡದ ಒಳಗೆ ತೆರೆದ ಅಂಗಳವನ್ನು ಆವರಿಸಿರುವ ಸುರಕ್ಷತಾ ಜಾಲದ ಬಲೆಯ ಮೇಲೆ ಬಿದ್ದನು. ಎಡ ಹಣೆಯ ಮೇಲೆ ಗಾಯಗಳಾಗಿದ್ದು ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಜಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

- 6th Standard, Social Studies, Civics, Chapter 21 – National Symbols and National Day Celebration
- 8th Standard, Social, Business Studies, Chapter 29 – EMERGENCE OF DIFFERENT BUSINESS ORGANISATIONS
- 6th Standard, Social, History, Chapter 16 – Indian Ideology and Bhakti cult
- 8th Standard, Mathematics, Chapter 12 – Factorisation
- 9th Standard, Social, History, CHAPTER 20 – REVOLUTION AND RISE OF NATION STATES
