ಯಕ್ಷಮಿತ್ರರು (ರಿ) ಪೊರ್ಕೋಡಿ ದಿನಾಂಕ :13.11.2022 ಆದಿತ್ಯವಾರದಂದು ಅಷ್ಠಮ ವಾರ್ಷಿಕೋತ್ಸವ ನಡೆಯಿತು. ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವನ್ನು ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಮ್ಮ ಯಕ್ಷಮಿತ್ರರು (ರಿ) ಪೊರ್ಕೋಡಿ ಸಂಸ್ಥೆಯ ವಿದ್ಯಾರ್ಥಿಗಳು ಆಡಿ ತೋರಿಸಿದರು.
ಸಭಾ ಕಾರ್ಯಕ್ರಮ ಸಂಜೆ 05:00 ಗಂಟೆಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಶ್ರೀಮಾನ್ ಅರುಣ್ ಕುಮಾರ್ ಕಾಟಿಪಳ್ಳ ಇವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ ವೆಂಕಟರಮಣ ಅಸ್ರಣ್ಣರು ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಕಟೀಲು ಇವರು ಆಶೀರ್ವಚನ ನೀಡಿದರು.
ವೇದಮೂರ್ತಿ ಪಿ ಕೃಷ್ಣ ಭಟ್ ಪ್ರಧಾನ ಅರ್ಚಕರು ಶ್ರೀ ಸೋಮನಾಥೇಶ್ವರ ದೇವಸ್ಥಾನ ಪೊರ್ಕೋಡಿ ಪೇಜಾವರ ಉಪಸ್ಥಿತರಿದ್ದರು. ವೇದಮೂರ್ತಿ ಎಂ ಗಣೇಶ್ ಭಟ್ ಜ್ಯೋತಿಷಿ ಮರಕಡ ಉಪಸ್ಥಿತರಿದ್ದರು. ಶ್ರೀಮಾನ್ ಕೃಷ್ಣಪ್ಪ ಪೂಜಾರಿ ಅಧ್ಯಕ್ಷರು ಶ್ರೀ ದೇವಿ ಭಕ್ತ ಸಂಘ ಕೆಂಜಾರು ಕಾನ, ಶ್ರೀಮತಿ ನಳಿನಿ ಜಿ ಶೆಟ್ಟಿ ಅಧ್ಯಕ್ಷರು ಸಿಂಚನ ಮಹಿಳಾ ಮಂಡಲ ಮತ್ತು ಬೆಥನಿ ಸಾಮಾಜ ಸೇವಾ ಕಾರ್ಯಕರ್ತೆ ಉಪಸ್ಥಿತರಿದ್ದರು.
ಎಸ್ ಎಸ್ ಎಲ್ ಸಿ ಯಲ್ಲಿ 85% ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸನ್ಮಾನ ಪತ್ರವನ್ನು ಶ್ರೀಮತಿ ನಿರ್ಮಲ ಟೀಚರ್ ಪ್ರಾಸ್ತಾವಿಸಿದರು. ಶ್ರೀಮತಿ ಎಂ ಲಕ್ಷ್ಮಿ .ಕೆ. ಕುಮಾರ್ ಇವರು ಸ್ವಾಗತಿಸಿ ಧನ್ಯವಾದಗೈದರು.




- 7th Standard, English – Unit 1 Prose – A Tiger in the House
- 7th Standard, Social – HISTORY CHAPTER 1 – MAJOR DEVELOPMENTS IN THE WORLD
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH