ಶ್ರೀರಾಮಾಯಣ ಸರಣಿಯ ತಾಳಮದ್ದಳೆಯ ಸಮಾರೋಪ.

ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ 2022 ರ ಜನವರಿಯಿಂದ ಆರಂಭವಾದ ಶ್ರೀರಾಮಾಯಣ ಸರಣಿಯ ತಾಳಮದ್ದಳೆಯು ಶ್ರೀರಾಮ ನಿರ್ಯಾಣ ತಾಳ ಮದ್ದಳೆಯೊಂದಿಗೆ ಮುಕ್ತಾಯಗೊಂಡಿತು.
ಭಾಗವತರಾಗಿ ಪದ್ಮನಾಭ ಕುಲಾಲ್, ಡಿ.ಕೆ ಆಚಾರ್ಯ ಅಲಂಕಾರು, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಹಿಮ್ಮೇಳದಲ್ಲಿ ಶ್ರೀಪತಿ ಉಪ್ಪಿನನಂಗಡಿ, ಮೋಹನ ಶರವೂರು, ಗುರುಮೂರ್ತಿ ಅಮ್ಮಣ್ಣಾಯ, ಕಾರ್ತಿಕ್ ಬಳ್ಳಮಂಜ ಅರ್ಥಧಾರಿಗಳಾಗಿ ಅಂಬಾ ಪ್ರಸಾದ್ ಪಾತಾಳ, ದಿವಾಕರ ಆಚಾರ್ಯ ಗೇರುಕಟ್ಟೆ, ಭಾಸ್ಕರ ಬಾರ್ಯ, ದಿವಾಕರ ಆಚಾರ್ಯ ನೇರೇಂಕಿ, ಜಿನೇಂದ್ರ ಜೈನ್, ಹರೀಶ್ ಆಚಾರ್ಯ ಉಪ್ಪಿನಂಗಡಿ,ಸಂಜೀವ ಪಾರೆಂಕಿ,ಗಂಗಾಧರ ಟೈಲರ್ ಭಾಗವಹಿಸಿದ್ದರು.
ಸರಣಿಯುದ್ದಕ್ಕೂ ಸಹಕರಿಸಿದ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಾಗವಹಿಸಿದ ಎಲ್ಲಾ ಕಲಾವಿದರಿಗೆ , ಯಕ್ಷಗಾನ ಸಂಘಗಳಿಗೆ ಅಧ್ಯಕ್ಷರಾದ ದಿವಾಕರ ಆಚಾರ್ಯ ಕೃತಜ್ಞತೆ ವ್ಯಕ್ತಪಡಿಸಿ,
ಸಂಘದ ಸುವರ್ಣ ಮಹೋತ್ಸವದ ಪ್ರಯುಕ್ತ ಜನವರಿ 2023 ರಿಂದ ಶ್ರೀ ಮಹಾಭಾರತ ಸರಣಿ ತಾಳಮದ್ದಲೆಯನ್ನು ಪ್ರಾಯೋಜಕರ ನೆಲೆಯಲ್ಲಿ ವಿಶಿಷ್ಟವಾಗಿ ನಡೆಸಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.


- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES