Saturday, September 21, 2024
Homeಸುದ್ದಿಮಗುವಿಗೆ ಎದೆಹಾಲು ನೀಡಲು ತೆರಳುತ್ತಿದ್ದಾಗ ಶಿಕ್ಷಕಿ ಲಾರಿ ಢಿಕ್ಕಿ ಹೊಡೆದು ಸಾವು 

ಮಗುವಿಗೆ ಎದೆಹಾಲು ನೀಡಲು ತೆರಳುತ್ತಿದ್ದಾಗ ಶಿಕ್ಷಕಿ ಲಾರಿ ಢಿಕ್ಕಿ ಹೊಡೆದು ಸಾವು 

ಮಗುವಿಗೆ ಎದೆಹಾಲು ನೀಡಲು ತೆರಳುತ್ತಿದ್ದಾಗ ಶಿಕ್ಷಕಿಯೊಬ್ಬರು ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಲಾರಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ. 

ಕಣ್ಣೂರು: ಮಗುವಿಗೆ ತನ್ನ ಎದೆ ಹಾಲುಣಿಸಲು ಮನೆಗೆ ಹೋಗುತ್ತಿದ್ದ ವೇಳೆ ಸ್ಕೂಟರ್‌ಗೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿ ಸಾವನ್ನಪ್ಪಿದ್ದಾರೆ.

ಮೃತರನ್ನು ಕೇರಳದ ಕಣ್ಣೂರು ಜಿಲ್ಲೆಯ ಮುರಿಂಗೋಡಿಯ ಸಜೀರ್ ಎಂಬುವರ ಪತ್ನಿ ರಶೀದಾ (30) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಅವಳು ಊಟ ಮಾಡಲು ಮತ್ತು ತನ್ನ ಒಂದೂವರೆ ತಿಂಗಳ ಮಗುವಿಗೆ ಹಾಲುಣಿಸಲು ತನ್ನ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದಳು. ಪೆರವೂರ್‌ನ ಇರಿಟ್ಟಿ ರಸ್ತೆಯಲ್ಲಿ ಆಕೆಯ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದಿದೆ.

ಆಕೆಯ ಪತಿ ಸಜೀರ್ ತೊಂಡಿಯಿಲ್‌ನಲ್ಲಿ ಅಂಗಡಿ ನಡೆಸುತ್ತಿದ್ದರು. ಅವರಿಗೆ ಶಹದಾ ಫಾತಿಮಾ ಮತ್ತು ಹಿದ್ವಾ ಫಾತಿಮಾ ಎಂಬಇಬ್ಬರು ಮಕ್ಕಳು ಇದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments