ನಾಡಿದ್ದು ದಶಂಬರ 11,ಭಾನುವಾರದಂದು ಉಪ್ಪಿನಂಗಡಿ ಸಮೀಪದ ಡಾ.ತಾಳ್ತಜೆ ವಸಂತಕುಮಾರ ಅವರ ಮನೆ ಸುಧಾಮದಲ್ಲಿ ವಸುಧಾ ಪ್ರತಿಷ್ಟಾನದ ವತಿಯಿಂದ ನಡೆಸಲ್ಪಡುವ ಹೇಮಂತ ಹಬ್ಬ ನಡೆಯಲಿದೆ.
ಡಾ.ವಿವೇಕ ರೈಗಳವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆ,ಮಹಿಳಾ ತಾಳಮದ್ದಳೆ, ಯಕ್ಷಗಾನ ಬಯಲಾಟ ಹೀಗೆ ಆ ದಿನ ಅಪರಾಹ್ನದಿಂದ ರಾತ್ರಿ 9 ಗಂಟೆ ತನಕ ವಿವಿಧ ಕಾರ್ಯಕ್ರಮಗಳು ಉಪಾಹಾರ, ಭೋಜನದ ಜೊತೆಜೊತೆಯಲ್ಲಿ ಸಂಪನ್ನಗೊಳ್ಳಲಿವೆ.
ಆ ದಿನವನ್ನು ಹೇಮಂತ ಹಬ್ಬಕ್ಕಾಗಿ ಮೀಸಲಿಡಿ. ಎಲ್ಲಾ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳಿಗೆ ಆದರದ ಸ್ವಾಗತವನ್ನು ವಸುಧಾ ಪ್ರತಿಷ್ಟಾನದ ಕಾರ್ಯದರ್ಶಿ ಡಾ.ಗೋವಿಂದ ಪ್ರಸಾದ ಕಜೆಯವರು ಕೋರಿದ್ದಾರೆ.

