ಎರಡು ದಿನಗಳ ಹಿಂದೆ ವಿಟ್ಲದಿಂದ ನಾಪತ್ತೆಯಾಗಿ ಎಲ್ಲರಲ್ಲೂ ಆತಂಕ ಸೃಷ್ಟಿಸಿದ್ದ ಯುವತಿ ಇದೀಗ ನಿನ್ನೆ ಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ವಿಟ್ಲ ಕಡಂಬು ನಿವಾಸಿಯಾಗಿದ್ದ ನಾಗೇಶ್ ಎಂಬವರ ಪತ್ನಿ ಕವಿತಾ (29) ನಾಪತ್ತೆಯಾಗಿದ್ದ ಯುವತಿ.
ನಿನ್ನೆ ಸಂಜೆ ಮುಡಿಪು ಎಂಬಲ್ಲಿ ಈ ಯುವತಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ವಿಟ್ಲ – ಮಂಗಳೂರು ರಸ್ತೆಯಲ್ಲಿರುವ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಕವಿತಾ ಅಕ್ಟೊಬರ್ 29ರಂದು ಸಂಜೆ ತಾನು ಕೆಲಸ ಮಾಡುತ್ತಿದ್ದ ಬೇಕರಿಯಿಂದ ಕೆಲಸ ಬಿಟ್ಟು ತೆರಳುವಾಗ ತಾನು ಇಂದು ತಾಯಿ ಮನೆಗೆ ಹೋಗುತ್ತಿದ್ದೇನೆಂದು ಸಹೋದ್ಯೋಗಿಗಳಲ್ಲಿ ಹೇಳಿಕೊಂಡಿದ್ದರು.
ತನ್ನ ಪತಿಗೂ ಕರೆ ಮಾಡಿ ತಾನು ತಾಯಿ ಮನೆಗೆ ಹೋಗುತ್ತಿರುವ ವಿಚಾರವನ್ನು ತಿಳಿಸಿದ್ದಳು ಎನ್ನಲಾಗಿದೆ. ಆದರೆ ಮೀರಿದರೂ ತಾಯಿ ಮನೆಗೆ ತಲುಪಿಲ್ಲದಿದ್ದುದರಿಂದ ಆಕೆಯ ಸಹೋದರ ಗಿರೀಶ್ ಈ ವಿಚಾರವನ್ನು ಆಕೆಯ ಪತಿಗೆ ತಿಳಿಸಿದ್ದರು.
ಆಕೆಯ ಮೊಬೈಲ್ ಗೆ ಮೇಲಿಂದ ಮೇಲೆ ಕರೆಗಳನ್ನು ಮಾಡಿದಾಗ ಮೊಬೈಲ್ ಸ್ವಿಟ್ಚ್ ಆಫ್ ಬರುತ್ತಿತ್ತು. ಇದರಿಂದ ಆತಂಕಗೊಂಡ ಕವಿತಾ ಅವರ ಪತಿ ನಾಗೇಶ್ ಎಲ್ಲೆಡೆ ಹುಡುಕಾಡಿ ಕೊನೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅದರಂತೆ ದೂರು ದಾಖಲಿಸಿದ ಪೊಲೀಸರು ನಿನ್ನೆ ಕವಿತಾ ಅವರನ್ನು ಮುಡಿಪು ಎಂಬಲ್ಲಿ ಪತ್ತೆಹಚ್ಚಿದ್ದಾರೆ. ಕವಿತಾ ಅವರು ಅಲ್ಲಿಗೆ ಯಾಕೆ ಹೋಗಿದ್ದರು ಯಾರಾದರೂ ಸಂಬಂಧಿಕರ ಮನೆಯಲ್ಲಿದ್ದರೇ ಮೊದಲಾದ ಮಾಹಿತಿಗಳೆಲ್ಲಾ ಇನ್ನಷ್ಟೇ ತಿಳಿದುಬರಬೇಕಾಗಿದೆ.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ