Friday, September 20, 2024
Homeಸುದ್ದಿವೀಡಿಯೊ - ವಾಗ್ವಾದದ ನಂತರ ಜನರ ಮೇಲೆ ಕಾರು ಹತ್ತಿಸಿದ ವ್ಯಕ್ತಿ - ಮೂವರಿಗೆ ಗಂಭೀರ...

ವೀಡಿಯೊ – ವಾಗ್ವಾದದ ನಂತರ ಜನರ ಮೇಲೆ ಕಾರು ಹತ್ತಿಸಿದ ವ್ಯಕ್ತಿ – ಮೂವರಿಗೆ ಗಂಭೀರ ಗಾಯ, ಕಾರು ಚಾಲಕನ ಬಂಧನ 

ದೆಹಲಿ: ಅಕ್ಟೋಬರ್ 26 ರಂದು ಅಲಿಪುರ್ ಪ್ರದೇಶದಲ್ಲಿ ಬೈಕ್ ಸವಾರನೊಂದಿಗಿನ ವಾಗ್ವಾದದ ನಂತರ ಕಾರೊಂದು ಜನರ ಮೇಲೆ ಹರಿಸಲಾಗಿದೆ. 3 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಚಾಲಕ, ನಿತಿನ್ ಮಾನ್ ನನ್ನು ಬಂಧಿಸಲಾಗಿದೆ, ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ.

ಬುಧವಾರ ಸಂಜೆ ದೆಹಲಿಯ ಹೊರ ಉತ್ತರದಲ್ಲಿ ನೆರೆಹೊರೆಯವರ ನಡುವೆ ಜಗಳ ವಿಕೋಪಕ್ಕೆ ಹೋಗಿದ್ದು, ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಜಗಳವಾಡಿದ ನಂತರ ಕಾರಿನ ಚಾಲಕ ಮೂವರ ಮೇಲೆ ತನ್ನ ಕಾರನ್ನು ಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನನ್ನು ಅಲಿಪುರ ನಿವಾಸಿ ನಿತಿನ್ ಮಾನ್ ಎಂದು ಗುರುತಿಸಲಾಗಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಕಿರಿದಾದ ರಸ್ತೆಯಲ್ಲಿ ಸಂಚರಿಸುವಾಗ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆಯುವುದನ್ನು ತೋರಿಸುತ್ತಿದೆ. ವಾಗ್ವಾದ ಮುಂದುವರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ.

ಸ್ವಲ್ಪ ಸಮಯದ ನಂತರ, ಕಾರಿನಲ್ಲಿದ್ದ ವ್ಯಕ್ತಿಯು ಅವನು ಹೊರಡುವಾಗ ಗುಂಪಿನ ಮೇಲೆ ಕಾರನ್ನು ಹತ್ತಿಸಿಕೊಂಡು ಹಲವಾರು ಜನರನ್ನು ಗಾಯಗೊಳಿಸಿದ್ದಾನೆ.

ಡಿಸಿಪಿ (ಔಟರ್ ನಾರ್ತ್) ದೇವೇಶ್ ಮಹಲಾ ಪ್ರಕಾರ, “ಮೂವರು ಗಾಯಾಳುಗಳನ್ನು ಅಲಿಪುರದ ನೆಹರು ಎನ್‌ಕ್ಲೇವ್‌ನಿಂದ ನರೇಲಾದ ಎಸ್‌ಆರ್‌ಹೆಚ್‌ಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಅಲ್ಲಿ ಪೊಲೀಸರು ಅವರ ವೈದ್ಯಕೀಯ-ಕಾನೂನು ವರದಿಗಳನ್ನು ಸಂಗ್ರಹಿಸಿದ್ದಾರೆ.

ಪಿರ್ಯಾದಿದಾರರಾದ ರಾಜ್ ಕುಮಾರ್ ರವರು ಚಾಲಕನು ಯುವಕನೊಂದಿಗೆ ಜಗಳವಾಡುತ್ತಿರುವುದನ್ನು ನೋಡಿ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದನು ಮತ್ತು ಹಬ್ಬದ ದಿನದಂದು ಜಗಳ ಮಾಡಬೇಡಿ ಎಂದು ಹೇಳಿದ್ದಾನೆ. ಇಬ್ಬರು ಸರಳವಾದ ಗಾಯಗಳನ್ನು ಹೊಂದಿದ್ದು, ಇನ್ನೊಬ್ಬರು ಮುರಿತಕ್ಕೆ ಒಳಗಾಗಿದ್ದಾರೆ. ಅವರೆಲ್ಲರೂ ಸ್ಥಿರ ಸ್ಥಿತಿಯಲ್ಲಿದ್ದಾರೆ.

ಈ ಕುರಿತು ಅಲಿಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 (ನಿರ್ಲಕ್ಷ್ಯದ ಚಾಲನೆ) 337 (ಜೀವಕ್ಕೆ ಅಪಾಯ ತಂದೊಡ್ಡುವ ಕೃತ್ಯದಿಂದ ಗಾಯ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments