ದಿನಾಂಕ 23.10.2022ರ ಆದಿತ್ಯವಾರದಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 10 ಘಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ಶ್ರೀ ವೆಂಕಟರಮಣ ಹೊಳ್ಳ ಅವರು ಉದ್ಘಾಟಿಸಲಿದ್ದಾರೆ.


ಗುರುನರಸಿಂಹ ಯಕ್ಷ ಬಳಗ ಮೀಯಪದವು ಇವರು “ಭಕ್ತ ಮಯೂರಧ್ವಜ” ಎಂಬ ತಾಳಮದ್ದಳೆಯನ್ನು ನಡೆಸಿಕೊಡಲಿದ್ದಾರೆ. ಹೆಚ್ಚಿನ ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ.