ತಿರುವನಂತಪುರಂ: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಆತ್ಮಕಥೆಯಿಂದ ಹೆಚ್ಚಿನ ಮಾಹಿತಿ ಹೊರಬಿದ್ದಿದೆ.
ಐಎಎಸ್ ಅಧಿಕಾರಿ ಶಿವಶಂಕರ್ ಅವರು ಸ್ವಪ್ನಾ ಜೊತೆಗಿನ ಸಂಬಂಧದ ಬಗ್ಗೆ ಪತ್ನಿಗೆ ಹೇಳಿದಾಗ ಅವರು ಯಾವುದೇ ಚಿಂತೆಯಿಲ್ಲದೆ ಶುಭ ಹಾರೈಸಿದರು ಎಂದು ಸ್ವಪ್ನಾ ಬಹಿರಂಗಪಡಿಸಿದ್ದಾರೆ.
‘ನನ್ನ ಜೊತೆಗಿನ ಸಂಬಂಧದ ಬಗ್ಗೆ ಐಎಎಸ್ ಅಧಿಕಾರಿ ಶಿವಶಂಕರ್ ಪತ್ನಿಗೆ ಹೇಳಿದಾಗ ಯಾವುದೇ ಸಮಸ್ಯೆ ಇರಲಿಲ್ಲ. ಅವನು (ಶಿವಶಂಕರ್) ನನ್ನಲ್ಲಿ (ಸ್ವಪ್ನಾ) ಕೆಲವು ಗುಣಗಳನ್ನು ಕಂಡಿರಬಹುದು ಎಂದು ಶಿವಶಂಕರ್ ಪತ್ನಿ ಹೇಳಿದ್ದಳು.
ಇದಾದ ನಂತರ ಐಎಎಸ್ ಅಧಿಕಾರಿ ಶಿವಶಂಕರ್ ಮನೆಯಿಂದ ಹೊರಬಂದು ಹೀದರ್ ಅಪಾರ್ಟ್ಮೆಂಟ್ನಲ್ಲಿರುವ ಫ್ಲ್ಯಾಟ್ಗೆ ಸ್ಥಳಾಂತರಗೊಂಡರು. ನಮ್ಮ ನಂತರದ ಭೇಟಿಗಳೆಲ್ಲಾ ಫ್ಲಾಟ್ನಲ್ಲಿಯೇ ನಡೆದವು’ ಎಂದು ಸ್ವಪ್ನಾ ಬರೆದುಕೊಂಡಿದ್ದಾರೆ.