ನಾಳ ದೇವಳಕ್ಕೆ ತಾಳಮದ್ದಳೆಯ ಪೀಠೋಪಕರಣಗಳ ಕೊಡುಗೆ
ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಸಲು ಅನುಕೂಲ ಆಗುವಂತೆ ರೂಪಾಯಿ 50 ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ಮರದ ಪೀಠೋಪಕರಣಗಳ ಕೊಡುಗೆಯನ್ನು ಸಮರ್ಪಿಸಿದ ಜಗನ್ನಾಥ ವಂಜರೆ ಇವರನ್ನು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಜರುಗಿದ ತಾಳಮದ್ದಳೆ ಸಪ್ತಾಹದ ಸಮಾರೋಪದಲ್ಲಿ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದ ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಗೌರವಿಸಿದರು.
ದೇವಳದ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಡಾ. ಸುರೇಶ್ ಕುಮಾರ್ ಶೆಟ್ಟಿ ತುಂಬೆ ಜಾಲು, ಕರುಣಾಕರ ಶೆಟ್ಟಿ ಬೆಳ್ತಂಗಡಿ, ಕಚೇರಿ ಪ್ರಬಂಧಕ ಗಿರೀಶ್ ಶೆಟ್ಟಿ ನಾಳ, ರಾಘವ ಎಚ್ ಗೇರುಕಟ್ಟೆ, ರಾಜೇಶ್ ಪೆರ್ಮುಡ, ಸಂಜೀವ ಪಾರೇಂಕಿ,
ವಿಜಯಕುಮಾರ್ ಕೊಯ್ಯೂರ್, ಗುರುವಾಯನಕೆರೆ ರಬ್ಬರ್ ಸೊಸೈಟಿಯ ಪ್ರಬಂಧಕರಾದ ಅಶೋಕ ಆಚಾರ್ಯ ನಾಳ, ಪುರುಷೋತ್ತಮ. ಜಿ, ಕನ್ಯಾಡಿ ಯಕ್ಷ ಭಾರತಿ (ರಿ)ಸಂಸ್ಥೆಯ ಖಜಾಂಜಿ ಚಂದ್ರಶೇಖರ ಗುರುವಾಯನಕೆರೆ ಉಪಸ್ಥಿತರಿದ್ದರು.