Friday, September 20, 2024
Homeಸುದ್ದಿಬಸ್​ನಿಂದ ಕೆಳಗೆ ಬಿದ್ದ ರಕ್ಷಿತಾ ಮೆದುಳು ಸಂಪೂರ್ಣ ನಿಷ್ಕ್ರಿಯ - ಮಗಳ ಎಲ್ಲಾ  ಒಂಬತ್ತು ಅಂಗಾಂಗಳನ್ನು ದಾನ ಮಾಡಿ...

ಬಸ್​ನಿಂದ ಕೆಳಗೆ ಬಿದ್ದ ರಕ್ಷಿತಾ ಮೆದುಳು ಸಂಪೂರ್ಣ ನಿಷ್ಕ್ರಿಯ – ಮಗಳ ಎಲ್ಲಾ  ಒಂಬತ್ತು ಅಂಗಾಂಗಳನ್ನು ದಾನ ಮಾಡಿ ಸಾವಿನ ನೋವಿನಲ್ಲೂ ಸಾರ್ಥಕತೆ ಮರೆದ ಆಕೆಯ ಹೆತ್ತವರು 

ಚಿಕ್ಕಮಗಳೂರಿನಲ್ಲಿ ಸಾರಿಗೆ ಬಸ್ ಒಂದರಿಂದ ಕೆಳಗೆ ಬಿದ್ದು ಯುವತಿ ಬಲಿಯಾಗಿದ್ದಾಳೆ.  ಸೋಮನಹಳ್ಳಿ ತಾಂಡ್ಯದ ರಕ್ಷಿತಾ ಮೃತ ಯುವತಿ. ಬಸ್​ನಿಂದ ಕೆಳಗೆ ಬಿದ್ದು ರಕ್ಷಿತಾ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. 

ರಕ್ಷಿತಾ  ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದಳು.  ಸೋಮನಹಳ್ಳಿ ತಾಂಡ್ಯಾದ ಶೇಖರ್ ನಾಯ್ಕ್, ಲಕ್ಷ್ಮಿಬಾಯಿ ದಂಪತಿಯ ಪುತ್ರಿ ರಕ್ಷಿತಾ ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಳು.  

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ನಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗುತ್ತಿದ್ದಳು. ಮನೆಗೆ ಹೋಗಲೆಂದು ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸುತ್ತಿರುವಾಗ ಅಕಾಸ್ಮಾತ್ ಕೆಳಗೆ ಬಿದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.  

ತಲೆಗೆ ಗಂಭೀರ ಗಾಯವಾಗಿ ಮೆದುಳು  ಸಂಪೂರ್ಣ ನಿಷ್ಕ್ರಿಯವಾಗಿತ್ತು.  ವೈದ್ಯರು ಬದುಕಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು ಹಾಗೂ ಬೇರೆಲ್ಲಾ ಅಂಗಾಂಗಳಿಗೆ ಯಾವುದೇ ತೊಂದರೆಯಾಗದ ಕಾರಣ ಅವುಗಳ ದಾನ ಮಾಡುವ ಸಾಧ್ಯತೆ ಇದೆ ಎಂದು ಸೂಚಿಸಿದ್ದರು. ಕೂಡಲೇ ಇದಕ್ಕೆ ಒಪ್ಪಿದ ಹೆತ್ತವರಾದ ಶೇಖರ್ ನಾಯ್ಕ್- ಲಕ್ಷ್ಮಿ ಬಾಯಿ ದಂಪತಿ ರಕ್ಷಿತಾಳ ಎಲ್ಲಾ ಅಂಗಾಂಗಗಳ ದಾನಕ್ಕೆ ಮುಂದಾಗಿ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಕೂಡುಕುಟುಂಬದಲ್ಲಿ ಬದುಕುತ್ತಿದ್ದ ರಕ್ಷಿತಾಳ ಒಟ್ಟು 14 ಜನ ಅಣ್ಣಂದಿರು ಒಬ್ಬಳೇ ತಂಗಿಯ ಸಾವಿಗೆ ದುಃಖಿಸುತ್ತಿದ್ದಾರೆ. “ನಮ್ಮ ತಂಗಿಯನ್ನು ನಾವಿನ್ನು ನೋಡಲಾರೆವು. ಆದರೆ ಅವಳ ಕಣ್ಣುಗಳಿಂದ ಯಾರಾದರೂ ನಮ್ಮನ್ನು ನೋಡಬಹುದು’ ಎಂದು ರಕ್ಷಿತಾಳ ಅಣ್ಣನೊಬ್ಬನು ಹೇಳುತ್ತಿದ್ದ ಮಾತುಗಳು ನೆರೆದಿದ್ದವರಲ್ಲಿ ಕಣ್ಣೀರು ತರಿಸಿತ್ತು.

ಅಂಗಾಂಗ ದಾನಕ್ಕೆ ಈಗಾಗಲೇ  ಬೆಂಗಳೂರು, ಚೆನ್ನೈನಿಂದ ನುರಿತ ವೈದ್ಯರ ತಂಡವೂ ಆಗಮಿಸಿದೆ. ಇಂದು ಅಂದರೆ ಗುರುವಾರ 22.09.2022 ಬೆಳಗ್ಗೆ  11 ಘಂಟೆ ಸುಮಾರಿಗೆ ರಕ್ಷಿತಾ ಅಂಗಾಂಗ ತೆಗೆಯುವ ಪ್ರಕ್ರಿಯೆ ನಡೆಯಲಿದೆ. ಕೂಡಲೇ ಹೆಲಿಕಾಪ್ಟರ್ ಮೂಲಕ ಅಂಗಾಂಗಗಳನ್ನು ಸಂಬಂಧಪಟ್ಟ ಸ್ಥಳಗಳಿಗೆ ರವಾನೆ ಮಾಡಲಾಗುವುದು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments