ಉಡುಪಿ : ಪದವಿ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ಓದುತ್ತಿರುವ ವಿದ್ಯಾಪೋಷಕ್ ಪಲಾನುಭವಿ ವಿದ್ಯಾರ್ಥಿಗಳ ಅರ್ಧ ದಿನದ ಶೈಕ್ಷಣಿಕ ಸಮಾವೇಶ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಪ್ಟಂಬರ್ 4, 2022 ಭಾನುವಾರದಂದು ಸಂಪನ್ನಗೊ೦ಡಿತು.
ಹುಬ್ಬಳ್ಳಿಯ ಮೈಲೈಫ್ ಸಂಸ್ಥೆಯ ಸ್ಥಾಪಕ ಪ್ರವೀಣ ಗುಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಭಾಗವಹಿಸಿದ 300 ವಿದ್ಯಾರ್ಥಿಗಳಿಗೆ ನವೀಕರಣದ ಅರ್ಜಿ ನಮೂನೆ ವಿತರಿಸಲಾಯಿತು.
ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಸ್ಥಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಮಾವೇಶದ ಉದ್ದೇಶ ಅಗತ್ಯ ವಿವರಿಸಿದರು. ನಾರಾಯಣ ಎಂ.ಹೆಗಡೆ ವಿದ್ಯಾರ್ಥಿಗಳಿಗೆ ಅಗತ್ಯದ ಸೂಚನೆ ನೀಡಿದರು.
ರಾಜಗೋಪಾಲ ಆಚಾರ್ಯ, ಎಚ್.ಎನ್.ಶೃಂಗೇಶ್ವರ್, ಭುವನ ಪ್ರಸಾದ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ, ಅಶೋಕ ಎಂ, ಎಚ್ .ಎನ್.ವೆಂಕಟೇಶ್, ಗಣೇಶ ಬ್ರಹ್ಮಾವರ ಹಾಗೂ ಮಂಜುನಾಥ ಉಪಸ್ಥತರಿದ್ದರು.
