ಗುರುವಾರ ಶ್ರೀಗಣೇಶ ಚತುರ್ಥಿಯ ಶುಭ ಸಂದರ್ಬದಲ್ಲಿ ಸೀತಾ೦ಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಗಣೇಶೋತ್ಸವದ ಪ್ರಯುಕ್ತ ಸ್ವಸ್ತಿಶ್ರೀ ಕಲಾ ಪ್ರತಿಷ್ಟಾನ ಎಡನಾಡು ಇವರಿಂದ ಅಡೂರು ಬಳಕಿಲ ವಿಷ್ಣಯ್ಯ ವಿರಚಿತ ಶ್ರೀ ಗಣಪತಿ ಮಹಾತ್ಮೆ’ ಎಂಬ ಯಕ್ಷಗಾನ ಕೂಟವು ನಡೆಯಿತು.
ಭಾಗವತರಾಗಿ ಶ್ರೀ ಸಚಿನ್ ಶೆಟ್ಟಿ ಕುದುರೆಪ್ಪಾಡಿ ಚೆಂಡೆ ಮತ್ತು ಮದ್ದಳೆಗಾರರಾಗಿ ಶ್ರೀ ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಶ್ರೀ ಲಕ್ಷ್ಮೀಶ ಬೆಂಗ್ರೋಡಿ,
ಅರ್ಥದಾರಿಗಳಾಗಿ ಶ್ರೀ ಶಂಕರ ರೈ ಮಾಸ್ಟರ್ ಮಂಟಪಾಡಿ, ಶ್ರೀ ಶೇಣಿ ವೇಣುಗೋಪಾಲ ಭಟ್, ಶ್ರೀ ಶಶಿಧರ ಕುದಿಂಗಿಲ, ಶ್ರೀ ಕಾರ್ತಿಕ ಪಡ್ರೆ ಭಾಗವಹಿಸಿದ್ದು ಮೊದಲಿಗೆ ಅಪ್ಪಣ್ಣ ಸೀತಾಂಗೋಳಿ ಸ್ವಾಗತಿಸಿ ಕೊನೆಗೆ ವಂದಿಸಿದರು.