Friday, September 20, 2024
Homeಸುದ್ದಿಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ 

ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ 

ಕೂಡ್ಲು ಗ್ರಾಮದಲ್ಲಿರುವ ಅತ್ಯಂತ ಪುರಾತನ ಕ್ಷೇತ್ರವಾಗಿರುವ  ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 04.09.2022ನೇ ಭಾನುವಾರ  ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿರುವುದು. ಬೆಳಗ್ಗೆ 9.00 ಘಂಟೆಗೆ ಪೂಜೆ ಆರಂಭಗೊಳ್ಳಲಿರುವುದು.

ಮಧ್ಯಾಹ್ನ 12 ಘಂಟೆಗೆ ದೇವಸ್ಥಾನದ ಪೂಜೆ ಕಳೆದ ಮೇಲೆ ಸತ್ಯನಾರಾಯಣ ದೇವರ ಮಹಾಪೂಜೆ ನಡೆಯಲಿರುವುದು. 1.00 ಘಂಟೆಗೆ ಅನ್ನದಾನ ಆರಂಭಗೊಳ್ಳುವುದು.

ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ, ಸ್ಥಳಪುರಾಣಗಳನ್ನೊಳಗೊಂಡಿರುವ “ಚಕ್ರತೀರ್ಥ” ಎಂಬ ಕೃತಿ ಬಿಡುಗಡೆಗೊಳ್ಳಲಿರುವುದು. ಊರ, ಪರವೂರ ಭಕ್ತರನ್ನು ಈ ಕಾರ್ಯಕ್ರಮಕ್ಕೆ ವಿನಯಪೂರ್ವಕ ಆಮಂತ್ರಿಸಲಾಗಿದೆ ಎಂದು ಪೂಜಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments