ಸಂಗಮ ಕ್ಷೇತ್ರ ಉಪ್ಪಿನಂಗಡಿಯಲ್ಲಿ ಯಕ್ಷಸಂಗಮ ಉಪ್ಪಿನಂಗಡಿ ಹಾಗೂ ವಾಟ್ಸಾಪ್ ಬಳಗದ ವತಿಯಿಂದ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಯಕ್ಷ ಪಂಚಮ 2022, 5 ನೇ ವರ್ಷದ ಯಕ್ಷೋತ್ಸವ ಪ್ರಯುಕ್ತ ಪರಿಣಯತ್ರಯ (ಅಸಿಕ ಪರಿಣಯ, ಉಷಾ ಪರಿಣಯ, ಸ್ವಯಂಪ್ರಭಾ ಪರಿಣಯ), ದುಂದುಭಿ ಎಂಬ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸೆಪ್ಟೆಂಬರ್ 17 ರ ಶನಿವಾರದಂದು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಳದ ವಠಾರದಲ್ಲಿ, ಸಂಜೆ 5.30 ರಿಂದ ಮರುದಿನ ಮುಂಜಾನೆಯವರೆಗೆ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ, ಪುತ್ತೂರು ಹಾಗೂ ಕರಾವಳಿಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪರಿಣಯತ್ರಯ ಹಾಗೂ ದುಂದುಭಿ ಎಂಬ ಪ್ರದರ್ಶನ ನಡೆಯಲಿರುವುದು.
ಕಾರ್ಯಕ್ರಮದ ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ.
