ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನಕ್ಕೆ “”ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯವರು ತಮ್ಮ ಪ್ರಾಯೋಜಿತ “ಯಕ್ಷ ಶ್ರೀರಕ್ಷಾ ಗೌರವ” ಯೋಜನೆ ಯಡಿ 75,000/- ರೂಪಾಯಿಗಳ ಬೃಹತ್ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ.
ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸದಸ್ಯರಾದ ಶ್ರೀ ವಾಸು ಬಾಯಾರ್ ರವರು ಈ ಮೊತ್ತವನ್ನು ಪ್ರತಿಷ್ಠಾನಕ್ಕೆ ಹಸ್ತಾಂತರಿಸಿದರು.
“ಯಕ್ಷಗಾನ ಅಭ್ಯಾಸ ತರಗತಿ ದುಬಾಯಿಯ ಅಧ್ಯಕ್ಷರು ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ರವರಿಗೆ ಹಾಗು ಸರ್ವ ಸದಸ್ಯರಿಗೆ ಪ್ರತಿಷ್ಠಾನದ ವತಿಯಿಂದ ಅನಂತ ಧನ್ಯವಾದಗಳು. ತಮ್ಮೆಲ್ಲರ ಸಹಕಾರದಿಂದ ಗಡಿನಾಡು ಕಾಸರಗೋಡಿನ ಚರಿತ್ರೆ ಯಲ್ಲಿ ಈ ಯೋಜನೆ ಅಚ್ಚಳಿಯದೆ ಉಳಿಯುವಂತಾಗಲಿ” ಎಂದು ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.