ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ವಿಶ್ವಾಸ ಮತ ಗೆದ್ದಿದೆ. ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ್ ಮತದಾನದ ಆರಂಭಕ್ಕೂ ಮುನ್ನ ಬಿಹಾರ ವಿಧಾನಸಭೆಯಿಂದ ಪ್ರತಿಪಕ್ಷಗಳು ಹೊರನಡೆದಿದ್ದರಿಂದ ವಿಶ್ವಾಸ ಮತ ಗೆದ್ದಿದೆ. ಈಗ ಹೇಗೂ ಲಾಲೂ ಪ್ರಸಾದ್ ಯಾದವ್ ಮಗ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ ಸ್ಥಾನ ಅಭಾದಿತವಾಗಿ ಉಳಿದಿದೆ.
ಇನ್ನೂ ಒಂದು ಸುದ್ದಿ ಉಂಟು. ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಸಾಕ್ಷಿಗಳು ಮತ್ತು ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ ಸಿವಿಲ್ ಕೋರ್ಟ್ ಹಾಜಿಪುರ ಖುಲಾಸೆಗೊಳಿಸಿದೆ.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು 2015ರ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಜಾತಿ ಆಧಾರಿತ ಟೀಕೆಗಳನ್ನು ಮಾಡಿದ್ದಾರೆ ಮತ್ತು ನಡವಳಿಕೆಯ ಮಾದರಿಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಅಂದ ಹಾಗೆ ಮೇಲಿನ ಎರಡೂ ಸುದ್ದಿಗಳು ಬೇರೆ, ಬೇರೆ. ಒಂದಕ್ಕೊಂದು ಸಂಬಂಧ ಉಂಟು ಅಂತ ನಾವು ಹೇಳ್ತಿಲ್ಲ!