Friday, September 20, 2024
Homeಸುದ್ದಿಸೀರೆಯಲ್ಲಿ ಉಯ್ಯಾಲೆಯಾಡುತ್ತಿರುವಾಗ ಕೊರಳಿಗೆ ಸೀರೆ ಸುತ್ತಿ  ಬಾಲಕಿಯ  ಸಾವು - ಅನಂತಾಡಿ ಗ್ರಾಮದಲ್ಲೊಂದು ಹೃದಯವಿದ್ರಾವಕ ಘಟನೆ 

ಸೀರೆಯಲ್ಲಿ ಉಯ್ಯಾಲೆಯಾಡುತ್ತಿರುವಾಗ ಕೊರಳಿಗೆ ಸೀರೆ ಸುತ್ತಿ  ಬಾಲಕಿಯ  ಸಾವು – ಅನಂತಾಡಿ ಗ್ರಾಮದಲ್ಲೊಂದು ಹೃದಯವಿದ್ರಾವಕ ಘಟನೆ 

ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಂಟ್ರಂಜದಲ್ಲಿ 11 ವರ್ಷದ ಬಾಲಕಿಯೊಬ್ಬಳು ತಾನು ಆಡುತ್ತಿದ್ದ ಉಯ್ಯಾಲೆಗೆ ಸೀರೆಯು ಆಕಸ್ಮಾತಾಗಿ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟಿದ್ದಾಳೆ.

ಮೃತ ಬಾಲಕಿ ಬಂಟ್ರಂಜ ನಿವಾಸಿ ಶೇಖರ್ ಎಂಬವರ ಪುತ್ರಿ ಲಿಖಿತಾ ಎಂದು ತಿಳಿದುಬಂದಿದೆ. ಆಕೆಯು ಬಾಬನಕಟ್ಟೆ ಶಾಲೆಯಲ್ಲಿ ಆರನೇ ತರಗತಿ ಕಲಿಯುತ್ತಿದ್ದ ಹುಡುಗಿ.

ಆಕೆಯ ಹಾಗೂ ಮನೆಯವರ ಪಾಲಿಗೆ ಕೆಟ್ಟ ದಿನವಾಗಿದ್ದ ನಿನ್ನೆ ಲಿಖಿತಾ ಮನೆಯಲ್ಲಿಯೇ ಇದ್ದಳು. ಆಕೆಯ ತಂದೆ ಶೇಖರ್ ತನ್ನ ಪತ್ನಿ ಚಂದ್ರಾವತಿಯೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಾಗ ಅವಳು ಉಯ್ಯಾಲೆಯಲ್ಲಿ ಆಡುತ್ತಿದ್ದಳು.

ಆಕೆಯ ತಾಯಿ ಚಂದ್ರಾವತಿ ಹಿಂತಿರುಗಿ ಬಂದಾಗ ಮಗಳು ಸೀರೆಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕಂಡು ಜೋರಾಗಿ ಕಿರುಚಿದಳು. ಆಕೆಯ ಕೂಗಿನಿಂದ ಗಾಬರಿಗೊಂಡ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಾಲಕಿಯ ಕುತ್ತಿಗೆಗೆ ಸಿಕ್ಕಿಕೊಂಡಿದ್ದ ಸೀರೆಯನ್ನು ಬಿಡಿಸಿದರು.

ಆದರೆ, ಲಿಖಿತಾ ಅದಾಗಲೇ ಮೃತಪಟ್ಟಿದ್ದಳು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments