Friday, September 20, 2024
Homeಸುದ್ದಿವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ 3 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ 3 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ರಾಜರಾಜೇಶ್ವರಿ ಪ್ರೌಢ ಶಾಲೆ, ಪೊಳಲಿ ಇಲ್ಲಿ ದಿನಾಂಕ 30-07-2022ರಂದು ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಈ ಕೆಳಗಿನ 3 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಅದರಲ್ಲಿ ಪ್ರೌಢ ಶಾಲಾ ವಿಭಾಗದ ಹುಡುಗರು- ಪ್ರಣೀಲ್ ರೈ, 10ನೇ ತರಗತಿ( ಪ್ರಕಾಶ್ ಕುಮಾರ್ ರೈ ಮನವಳಿಕೆ ಗುತ್ತು ಮತ್ತು ಸತ್ಯಲತ ಪ್ರಕಾಶ್ ಇವರ ಪುತ್ರ)-ಪ್ರಥಮ ಸ್ಥಾನ,

ಧನುಷ್‌ರಾಮ್, 10ನೇ ತರಗತಿ (ಕಿಯೋನಿಕ್ಸ್ ನ ಮಾಲಕ ದಿನೇಶ್ ಪ್ರಸನ್ನ ಮತ್ತು ಉಮಾ.ಡಿ.ಪ್ರಸನ್ನ ಇವರ ಪುತ್ರ) – ದ್ವಿತೀಯ ಸ್ಥಾನ

ಹಾಗೂ ಪ್ರೌಢ ಶಾಲಾ ವಿಭಾಗದ ಹುಡುಗಿಯರ ವಿಭಾಗದಲ್ಲಿ ಸುಶ್ಮಿತ.ಟಿ.ರಾವ್, 9ನೇ ತರಗತಿ, (ತ್ರಿವಿಕ್ರಮ ರಾವ್ ಮತ್ತು ಶಾರದಾ ಇವರ ಪುತ್ರಿ) – ಪಂಚಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments