ಉಜಿರೆಯಲ್ಲಿ ನಡೆಯುತ್ತಿರುವ ಯಕ್ಷ ಸಪ್ತಾಹದ ಏಳು ದಿನಗಳಲ್ಲಿ ವಿವಿಧ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.
ಕೊನೆಯ ದಿನ ಯಕ್ಷನೃತ್ಯ ಕಾರ್ಯಕ್ರಮವೂ ನಡೆಯಲಿದೆ. ಈ ತಾಳಮದ್ದಳೆ ಜುಲೈ 22ರಿಂದ ಜುಲೈ 29ರ ತನಕ ಪ್ರತಿದಿನ ಸಂಜೆ ಘಂಟೆ 5.45ರಿಂದ ಆರಂಭವಾಗಲಿದೆ.
ಇಂದು ‘ಮೋಹಿನಿ ಏಕಾದಶಿ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಯೂಟ್ಯೂಬ್ ನೇರ ಪ್ರಸಾರ ಲಭ್ಯವಿದೆ. ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.
ಜುಲೈ 27 ರಂದು ಸಂಜೆ 5.45 ಗಂಟೆಗೆ, ಪ್ರಸಂಗ – ಮೋಹಿನಿ ಏಕಾದಶಿ
ಹಿಮ್ಮೇಳ: ರಾಘವೇಂದ್ರ ಆಚಾರ್ ಜನ್ಸಾಲೆ, ಸುನಿಲ್ ಭಂಡಾರಿ ಕಡತೋಕ, ಸುಜನ್ ಕುಮಾರ್ ಹಾಲಾಡಿ
ಮುಮ್ಮೇಳ: ಉಜಿರೆ ಅಶೋಕ ಭಟ್, ಶಶಿಕಾಂತ ಶೆಟ್ಟಿ ಕಾರ್ಕಳ, ವಿಷ್ಣುಶರ್ಮ ವಾಟೆಪಡ್ಪು, ಬಾಲಕೃಷ್ಣ ಭಟ್ ಪುತ್ತಿಗೆ
ನೇರಪ್ರಸಾರ ಯೂಪ್ಲಸ್ ಟಿವಿ, ಯೂಟ್ಯೂಬ್ ಹಾಗೂ ಫೇಸ್ಬುಕ್ ನಲ್ಲಿ ಲಭ್ಯವಿದೆ.
