ಯಕ್ಷಗಾನ ತಾಳಮದ್ದಳೆ ಕೂಟಗಳ ಆಸ್ವಾದಕರಿಗೆ ಜುಲೈ 22ರಿಂದ ಒಂದು ಒಳ್ಳೆಯ ಅವಕಾಶ ಸಿಗಲಿದೆ. ಸುಮಾರು ಏಳು ದಿನಗಳಲ್ಲಿ ವಿವಿಧ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.
ಕೊನೆಯ ದಿನ ಯಕ್ಷನೃತ್ಯ ಕಾರ್ಯಕ್ರಮವೂ ನಡೆಯಲಿದೆ. ಈ ತಾಳಮದ್ದಳೆ ಜುಲೈ 22ರಿಂದ ಜುಲೈ 29ರ ತನಕ ಪ್ರತಿದಿನ ಸಂಜೆ ಘಂಟೆ 5.45ರಿಂದ ಆರಂಭವಾಗಲಿದೆ.
ಇಂದು ‘ವಿಭೀಷಣ ನೀತಿ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಯೂಟ್ಯೂಬ್ ನೇರ ಪ್ರಸಾರ ಲಭ್ಯವಿದೆ.
ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.
ವಿವರಗಳಿಗೆ ಚಿತ್ರ ನೋಡಿ.