ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪಪ್ರಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ಇವರ ಅಭಿವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಗುರುದಕ್ಷಿಣೆ ತಾಳಮದ್ದಳೆ ನಡೆಯಿತು.
ಭಾಗವತರಾಗಿ ಮಹೇಶ್ ಕನ್ಯಾಡಿ, ಡಿ.ಕೆ ಆಚಾರ್ಯ ಅಲಂಕಾರು, ಪದ್ಮನಾಭ ಕುಲಾಲ್, ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮುರಳೀಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ ಅರ್ಥಧಾರಿಗಳಾಗಿ ಗಣರಾಜ ಕುಂಬ್ಳೆ, ಪಾತಾಳ ಅಂಬಾ ಪ್ರಸಾದ್, ಭಾಸ್ಕರ ಬಾರ್ಯ, ದಿವಾಕರ ಗೇರುಕಟ್ಟೆ, ಗುಡಪ್ಪ ಬಲ್ಯ, ಹರೀಶ್ ಆಚಾರ್ಯ ಬಾರ್ಯ, ತಿಲಕಾಕ್ಷ, ಪುಷ್ಪಲತಾ.ಎಂ ಭಾಗವಹಿಸಿದ್ದರು.
ಸಂಸ್ಥೆಯ ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಉಮೇಶ್ ಶೆಣೈ ಸದಸ್ಯರಾದ ರಾಮಚಂದ್ರ ಮಣಿಯಾಣಿ, ಸಂಸ್ಥೆಯ ಉಪಪ್ರಾಂಶುಪಾಲ ಶ್ರೀಧರ್ ಭಟ್. ಕೆ ಕಲಾವಿದರನ್ನು ಗೌರವಿಸಿದರು.
ಡಾ.ಗೋವಿಂದ್ ಪ್ರಸಾದ್ ಕಜೆ, ಪುರುಷೋತ್ತಮ್ ಆಚಾರ್ಯ ಬೆಳ್ತಂಗಡಿ, ನಿವೃತ್ತ ಶಿಕ್ಷಕ ಬಿ. ಸುಬ್ರಮಣ್ಯ ರಾವ್, ಪದ್ಮನಾಭ ಆಚಾರ್ಯ, ಗಂಗಾಧರ ಆಚಾರ್ಯ ನೇರೆಂಕಿ, ವಿಠ್ಠಲ್ ನಾಯಕ್ ಕಡಬ, ಗಂಗಾಧರ ಟೈಲರ್, ಶ್ರೀಮತಿ ಶೋಭಾ, ಶ್ರೀಮತಿ ವನಲಕ್ಷ್ಮಿ, ಶ್ರೀಮತಿ ಸುಚಿತ್ರ ಹೊಳ್ಳ, ಶ್ರೀಮತಿ ಸುಮಾ, ಶ್ರೀಮತಿ ಪ್ರಾರ್ಥನಾ, ಲಕ್ಷ್ಮೀಶ ನಾಯ್ಕ್ ಮೊದಲಾದ ಕಲಾಭಿಮಾನಿಗಳು ಉಪಸ್ಥಿತರಿದ್ದರು.

ಶಿಕ್ಷಕ ವಿಜಯ ಕುಮಾರ್ ನಾಯ್ಕ್ ಸ್ವಾಗತಿಸಿ ಶ್ರೀಧರ್ ಭಟ್ ವಂದಿಸಿದರು. ಹರೀಶ ಆಚಾರ್ಯ ಉಪ್ಪಿನಂಗಡಿ ತಾಳಮದ್ದಳೆ ಸಂಯೋಜನೆ ಮಾಡಿದರು.
- 7th Standard, English – Unit 1 Prose – A Tiger in the House
- 7th Standard, Social – HISTORY CHAPTER 1 – MAJOR DEVELOPMENTS IN THE WORLD
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH