Saturday, October 5, 2024
Homeಯಕ್ಷಗಾನಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ ಮತ್ತು ತಾಳಮದ್ದಳೆ

ಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ ಮತ್ತು ತಾಳಮದ್ದಳೆ


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಸಭಾಭವನದಲ್ಲಿ ಜರಗಿದ ಶ್ರೀ ಅನುಗ್ರಹ ಪಾರೆಂಕಿ ಪ್ರಾಯೋಜಕತ್ವದ ಕಲಾವಿದರ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ವಹಿಸಿದರು.


ಕುಂಬ್ಳೆ ಶ್ರೀಧರ ರಾವ್, ಪಾತಾಳ ಅಂಬಾಪ್ರಸಾದ್, ಜಿನೇಂದ್ರ ಜೈನ್, ಮಹಾಲಿಂಗೇಶ್ವರ ಭಟ್, ಹರೀಶ್ ಆಚಾರ್ಯ, ಶ್ರೀಪತಿ ಭಟ್ ಮತ್ತು ಗಂಗಾಧರ ಟೈಲರ್ ಇವರನ್ನು ಸನ್ಮಾನಿಸಲಾಯಿತು.


ಬಿ.ಸುಬ್ರಮಣ್ಯ ರಾವ್, ಪ್ರಭಾಕರ ಆಳ್ವ, ಪದ್ಮನಾಭ ಕುಲಾಲ್, ಗುರುಮೂರ್ತಿ ಅಮ್ಮಣ್ಣಾಯ ತಿಲಕಾಕ್ಷ, ವಿಜಯಕುಮಾರ್ ಕೊಯ್ಯೂರು, ಶಿವರಾಂ, ಕಿಶೋರ್, ದೇವಿಪ್ರಸಾದ್, ಕಾರ್ತಿಕ್ ಬಳ್ಳಮಂಜ ಇವರನ್ನು ಕಲಾ ಸೇವೆಗಾಗಿ ಗೌರವಿಸಲಾಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕುಂಬ್ಳೆ ಶ್ರೀಧರ ರಾವ್ ಉದ್ಘಾಟಿಸಿದರು. ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಷ ಉಮೇಶ ಶೆಣೈ ಎನ್, ಗೋಪಾಲ್ ಶೆಟ್ಟಿ ಕಳೆಂಜ, ಗುಡ್ಡಪ್ಪ ಬಲ್ಯ ಉಪಸ್ಥಿತರಿದ್ದರು.

ಶ್ರೀ ಅನುಗ್ರಹ ಸಂಜೀವ ಸ್ವಾಗತಿಸಿ ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ “ಶ್ರೀ ಕದಂಬ ಕೌಶಿಕೆ” ತಾಳಮದ್ದಲೆ ಜರಗಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments