Saturday, July 6, 2024
Homeಇಂದಿನ ಕಾರ್ಯಕ್ರಮಯಕ್ಷಗಾನ ಪ್ರದರ್ಶನ

ಯಕ್ಷಗಾನ ಪ್ರದರ್ಶನ

ನಿನ್ನೆ (7-1-2022) ಉಡುಪಿ ಕುಂಜಿಬೆಟ್ಟಿನ ಅರ್ಚನಾ ಸೊವರಿನ್ ನ ರೂಫ್ ಟಾಪ್ ನಲ್ಲಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ, ಅಂಬಲಪಾಡಿ ಇದರ ಬಾಲ ಕಲಾವಿದರಿಂದ ಶ್ರೀರಾಮ ದರ್ಶನಂ (ಮೈಂದ ದಿವಿದ ಕಾಳಗ) ನರಸಿಂಹ ತುಂಗರ ನಿರ್ದೇಶನದಲ್ಲಿ ಸೊಗಸಾಗಿ ಪ್ರಸ್ತುತಗೊಂಡಿತು.

ಯಕ್ಷಗಾನದ ಅಭಿಮಾನಿಯಾದ, ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಜನರಲ್ ಮೆನೇಜರ್ ಆಗಿ ನಿವೃತ್ತರಾದ ಶ್ರೀ ಪಿ. ಆರ್. ಶೆಣೈ ತಮ್ಮ ಎಪ್ಪತ್ತೊಂದನೇ ವರ್ಷದ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಯಕ್ಷಗಾನ ಕಲಾರಂಗದ ಸದಸ್ಯರು ದಾನಿಗಳು ಆದ ಶ್ರೀ ಪಿ. ಆರ್. ಶೆಣೈ ಹಾಗೂ ಅವರ ಪತ್ನಿಯನ್ನು ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಅಂಬಲ್ಪಾಡಿ ಮಂಡಳಿ ಅಧ್ಯಕ್ಷ ಕೆ. ಅಜಿತ್ ಕುಮಾರ್, ಕಾರ್ಯದರ್ಶಿ ಸುನಿಲ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ಯು. ವಿಶ್ವನಾಥ್ ಶೆಣೈ, ಪಿ. ಗೋಪಾಲಕೃಷ್ಣ ಪೈ ಹಾಗೂ ಉಭಯ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments