ನಿನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಅವಾರ್ಡ್ಸ್ ನ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಹುಲಿ ಸಿದ್ದೇಶ್ವರ ಯಕ್ಷನೈದಿಲೆ ಕಲಾ ಬಳಗದ ಕಲಾವಿದರು ನಮ್ಮ ನಾಡು ನುಡಿಯ ಕುರಿತಾದ ಯಕ್ಷಗಾನ ನೃತ್ಯ ಪ್ರದರ್ಶನವನ್ನು ನೀಡಿದರು. ಈ ಒಂದು ಯಕ್ಷಗಾನ ನೃತ್ಯಕ್ಕೆ ಕಲಾಕದಂಬ ಆರ್ಟ್ ಸೆಂಟರ್ ನ ಡಾ.ರಾಧಾಕೃಷ್ಣ ಉರಾಳರು ನಿರ್ದೇಶನ ನೀಡಿದ್ದರು. ಪೂಜಾ ಆಚಾರ್ಯ ಹಾಗೂ ನಿತ್ಯಾ ಗೌಡ ಈ ಒಂದು ಯಕ್ಷ ನೃತ್ಯವನ್ನು ಅಭಿನಯಿಸಿದರು.
